Mysore
28
scattered clouds

Social Media

ಶುಕ್ರವಾರ, 02 ಜನವರಿ 2026
Light
Dark

ಓದುಗರ ಪತ್ರ: ಕಾಂಗ್ರೆಸ್‌ನವರ ಒಳಜಗಳ ನಿಲ್ಲಲಿ

ಓದುಗರ ಪತ್ರ

ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಘರ್ಷದಿಂದ ಲಾಭವಾಗುವುದು ಬಿಜೆಪಿಗೆ. ಇದನ್ನು ಇಬ್ಬರೂ ತಿಳಿಯಬೇಕು. ಅಧಿಕಾರ, ಸಂಪತ್ತು, ಯೌವನ ಎಂದಿಗೂ ಶಾಶ್ವತವಲ್ಲ ಎಂಬುದನ್ನು ಅವರು ಮೊದಲು ಅರಿಯಲಿ.

ಹವಾಮಾನ ವೈಪರೀತ್ಯದಿಂದ ಜನರ ಬದುಕು ಹೈರಾಣಾಗಿದೆ. ಈ ಬಗ್ಗೆ ನಾಯಕರು ಹೆಚ್ಚು ಗಮನ ಹರಿಸಲಿ. ೨೦೨೩ರಲ್ಲಿ ಪಕ್ಷ ಅಧಿಕಾರಕ್ಕೆ ಪದಾರ್ಪಣೆಯಾದಾಗ ಈ ನಾಯಕರು ಆಡಿದಂತೆ, ಜನರು ಅಂದುಕೊಂಡಂತೆ ನಡೆದುಕೊಂಡು, ನಾಡಿನ ಆದರ್ಶ ನಾಯಕರಾಗಬೇಕು.

-ಕೆ.ಎಸ್.ಚಿಕ್ಕೇಗೌಡ, ಗಂಗೋತ್ರಿ ಬಡಾವಣೆ, ಮೈಸೂರು.

Tags:
error: Content is protected !!