ಬಸ್ ತಂಗುದಾಣದ ಮುಂಭಾಗ ಪ್ರಯಾಣಿಕರು ನಿಂತಿದ್ದರೂ ತಂಗುದಾಣದ ಮುಂದೆ ಕೆಎಸ್ಆರ್ಟಿಸಿ ಬಸ್ಗಳು ನಿಲುಗಡೆ ನೀಡದೆ ಮುಂದೆ ಹೋಗಿ ನಿಲುಗಡೆ ನೀಡುತ್ತಿದ್ದು, ಪ್ರಯಾಣಿಕರು ಓಡಿ ಹೋಗಿ ಬಸ್ ಹತ್ತಬೇಕಾದ ಪರಿಸ್ಥಿತಿ ಇಂದಿಗೂ ಮುಂದುವರಿಯುತ್ತಿದೆ.
ನಾನು ವಿದ್ಯಾರ್ಥಿಯಾದಗಿನಿಂದಲೂ (೪೦ ವರ್ಷಗಳ ಹಿಂದೆ) ಈ ಸಮಸ್ಯೆ ಇದೆ. ಅದು ಈಗಲೂ ಮುಂದುವರಿಯುತ್ತಿರುವುದು ಶೋಚನೀಯ. ಹಲವಾರು ಬಾರಿ ನಾನು ಗಮನಿಸಿದ ಹಾಗೆ ಕೆಲವು ಬಸ್ ಚಾಲಕರು, ಪ್ರಯಾಣಿಕರು ಓಡಿ ಬಂದೇ ಬಸ್ ಹತ್ತಲಿ ಎಂದು ತಂಗುದಾಣದ ಎದುರು ಬಸ್ ನಿಲುಗಡೆ ನೀಡದೆ, ಮುಂದೆಲ್ಲೋ ನಿಲುಗಡೆ ನೀಡುತ್ತಾರೆ. ಇದರಿಂದಾಗಿ ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಕಷ್ಟ ಪಟ್ಟು ಬಸ್ ಹತ್ತುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲ ಬಸ್ ಚಾಲಕರು ರಾತ್ರಿ ವೇಳೆ ನಿಗದಿತ ಮಾರ್ಗದಲ್ಲಿ ಸಂಚರಿಸದೇ ಬದಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದು, ಇದರಿಂದಾಗಿ ನಿಗದಿತ ರಸ್ತೆಯಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಆದ್ದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳು ಇಂತಹ ಸೂಕ್ಷ ವಿಚಾರಗಳ ಬಗ್ಗೆ ಗಮನಹರಿಸಿ, ಬಸ್ ತಂಗುದಾಣಗಳ ಮುಂದೆಯೇ ಬಸ್ ನಿಲುಗಡೆ ನೀಡುವಂತೆ ಚಾಲಕರಿಗೆ ಸೂಚಿಸಬೇಕಿದೆ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು.




