ಮೈಸೂರಿನ ಶಾರದಾದೇವಿನಗರ ವಾರ್ಡ್ನ ನಿವೇದಿತನಗರ ಪಾರ್ಕ್ ಬಲಬದಿಯ ತಿರುವಿನಲ್ಲಿ ಒಳಚರಂಡಿಯಲ್ಲಿ ಕಸ ತುಂಬಿದ್ದು, ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ದುರ್ವಾಸನೆಯಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವುದು ಅನಿವಾರ್ಯವಾಗಿದೆ. ಈ ಬಗ್ಗೆ ದೂರುನೀಡಲು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿದರೂ ಯಾರೂ ಕರೆ ಸ್ವೀಕರಿಸದೇ ಬೇಜವಾಬ್ದಾರಿ ತೋರಿದ್ದಾರೆ. ಸಂಬಂಧಪಟ್ಟವರು ಕೂಡಲೇ ಯುಜಿಡಿ ಮ್ಯಾನ್ಹೋಲ್ನಲ್ಲಿ ಸಂಗ್ರಹವಾಗಿರುವ ಕಸವನ್ನು ತೆರವು ಗೊಳಿಸುವ ಮೂಲಕ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಬೇಕಿದೆ.
-ಜೆ.ಡಿ.ದುಷ್ಯಂತ, ಶಾರದಾದೇವಿ ನಗರ , ಮೈಸೂರು





