ಚಾಮರಾಜನಗರ ಪಟ್ಟಣದಲ್ಲಿರುವ ನಂದಿ ಭವನದಲ್ಲಿ ಮದುವೆ ಮತ್ತು ಇತರ ಸಮಾರಂಭಗಳು ನಡೆಯುತ್ತವೆ. ಕಾರ್ಯಕ್ರಮಗಳು ಮುಗಿದ ಮೇಲೆ ಉಳಿದ ಆಹಾರ ಪದಾರ್ಥಗಳನ್ನು ಮುಂಭಾಗದಲ್ಲಿರುವ ಮೋರಿಗೆ ಸುರಿಯುತ್ತಾರೆ. ಈ ಭವನದಲ್ಲಿ ಪಾತ್ರೆಗಳನ್ನು ತೊಳೆಯುವ ನೀರೂ ಮೋರಿ ಸೇರುತ್ತಿದೆ.
ಮದ್ಯಪಾನ ಮಾಡಿದವರು ಬಾಟಲಿಗಳನ್ನು ಮೋರಿಗೆ ಬಿಸಾಡುತ್ತಿದ್ದಾರೆ. ಕಸ ಕಡ್ಡಿಗಳು ತುಂಬಿರುವುದರಿಂದ ಮೋರಿಯಲ್ಲಿ ಸರಾಗವಾಗಿ ನೀರು ಹರಿಯದೇ ಸೊಳ್ಳೆ, ನೊಣಗಳ ಹಾವಳಿ ಮಿತಿ ಮೀರಿದ್ದು, ರೋಗಗಳು ಹರಡುವ ಭೀತಿಯುಂಟಾಗಿದೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ನಂದಿ ಭವನದ ಮುಂಭಾಗದಲ್ಲಿರುವ ಮೋರಿಯನ್ನು ಸ್ವಚ್ಛಗೊಳಿಸಬೇಕು ಹಾಗೂ ಕಸಕಡ್ಡಿಗಳನ್ನು ಮೋರಿಗೆ ಹಾಕಿ ಗಲೀಜು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
-ನಾಗೇಶ್, ಮಾನಸಗಂಗೋತ್ರಿ, ಮೈಸೂರು





