ಮೈಸೂರಿನ ಕುವೆಂಪುನಗರ ವಿಶ್ವ ಮಾನವ ಜೋಡಿ ರಸ್ತೆಯ ಸಿ ಆಂಡ್ ಡಿ ಬ್ಲಾಕ್ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಕಷ್ಟು ಸಿಬ್ಬಂದಿ ಇಲ್ಲದೇ ಚಿಕಿತ್ಸೆಗೆ ಬರುವರಿಗೆ ತೀವ್ರ ತೊಂದರೆಯಾಗಿದೆ. ಒಬ್ಬರೇ ನರ್ಸ್ ಕರ್ತವ್ಯ ನಿರ್ವಹಿಸುತ್ತಿದ್ದು, ಅವರು ರಜೆ ಹಾಕಿದ ಸಂದರ್ಭದಲ್ಲಿ ಸಾರ್ವಜನಿಕರಿಗೆ ಚಿಕಿತ್ಸೆ ದೊರೆಯುವುದಿಲ್ಲ.
ಔಷಧಿಗಳು ಲಭ್ಯವಿದ್ದರೂ ರೋಗಿಗಳಿಗೆ ವಿತರಿಸದೇ ಜನೌಷಧಿ ಕೇಂದ್ರದಲ್ಲಿ ಖರೀದಿಸುವಂತೆ ಬರೆದುಕೊಡುತ್ತಾರೆ. ಸಂಬಂಧಪಟ್ಟವರು ಕೂಡಲೇ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಅಗತ್ಯವಿರುವ ವೈದ್ಯರು, ಶುಶ್ರೂಷಕಿಯರು ಹಾಗೂ ಸಿಬ್ಬಂದಿಯನ್ನು ನೇಮಿಸಬೇಕು ಹಾಗೂ ಚಿಕಿತ್ಸೆ ಪಡೆಯುವವರಿಗೆ ಆರೋಗ್ಯ ಕೇಂದ್ರದಲ್ಲೇ ಔಷಧಿ ವಿತರಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಜಿ.ನಾಗೇಂದ್ರ ಶರ್ಮ, ಕುವೆಂಪುನಗರ , ಮೈಸೂರು



