ಅನುವಾದ (ಭಾಷಾಂತರ)ವನ್ನು ‘ಅಲಕ್ಷಿತ ಕಲೆ’ ಎಂದಿದ್ದಾನೆ, ಹೈಟ್ ಎಂಬ ದೊಡ್ಡ ವಿಮರ್ಶಕ. ಅದು ಒಂದು ಅರ್ಥದಲ್ಲಿ ದಿಟ; ಆದರೆ ಇನ್ನೊಂದರ್ಥದಲ್ಲಿ ಅದು ಅತ್ಯಂತ ಮಹತ್ವದ ಸಾಹಿತ್ಯಕ ಚಟುವಟಿಕೆ: ಬುಕರ್, ನೊಬೆಲ್ ಮುಂತಾದ ಪ್ರಶಸ್ತಿಗಳೆಲ್ಲ ಭಾಷಾಂತರವನ್ನು ಆಧರಿಸಿದವಲ್ಲವೆ?
ಅನುವಾದಕ್ಕೆ ಧನ್ಯ‘ವಾದ’ಗಳು!
ಅಹಂಕಾರ: ಸತೀಶ್ ಜಾರಕಿಹೊಳಿ ಗೌರವ ಡಾಕ್ಟರೇಟ್ ನಿರಾಕರಿಸಿದ್ದಾರೆ! ಕುವೆಂಪು ಉಕ್ತಿಯೊಂದಿದೆ: ‘ಪ್ರಶಸ್ತಿ ಬೇಕು ಎನ್ನುವುದು ಅಹಂಕಾರ. ಬಂದ ಪ್ರಶಸ್ತಿಯನ್ನು ನಿರಾಕರಿಸುವುದು ಇನ್ನೂ ದೊಡ್ಡ ಅಹಂಕಾರ’
-ಸಿಪಿಕೆ, ಮೈಸೂರು





