ಏಕಸ್ವಾಮ್ಯ ಸಾಧಿಸಲು
ತಯಾರು ಪರಮಾಣು ಅಣ್ವಸ್ತ್ರ
ಅದಕ್ಕಾಗಿಯೇ ನಿಲ್ಲದೆ ನಡೆಯುತ್ತಿದೆ
ವಾಯು, ಡ್ರೋನ್, ಕ್ಷಿಪಣಿ ದಾಳಿ
ನೆತ್ತರು ಹರಿಯುತ್ತಿದೆ
ಹಿಂಸೆ ರೂಪ ತಾಳಿ
ಬುದ್ಧನೆ ಮತ್ತೊಮ್ಮೆ ನೀ ಹುಟ್ಟಿ ಬಾ
ಜಗಕ್ಕೆಲ್ಲ ನಿನ್ನ ತತ್ವ ಸಾರ ಸಾರು ಬಾ
ಹಿಂಸೆ ತೊಲಗಲಿ ಈ ಸಂಘರ್ಷ ಕೊನೆಗೊಳ್ಳಲಿ.
-ಶಿವಣ್ಣ , ಕಣೇನೂರು , ನಂಜನಗೂಡು





