Mysore
28
scattered clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಓದುಗರ ಪತ್ರ: ರಸ್ತೆ ಬದಿ ಮೀನು ಮಾರಾಟ ನಿಷೇಧಿಸಿ

ಓದುಗರ ಪತ್ರ

ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ಲಕ್ಷ್ಮಣತೀರ್ಥ ನದಿಗೆ ಹೊಂದಿಕೊಂಡಂತೆ ಕೆ.ಆರ್ ನಗರ – ಹುಣಸೂರು ರಸ್ತೆಯ ಪಕ್ಕದಲ್ಲಿ ಅಕ್ರಮವಾಗಿ ಸುಮಾರು ೬-೭ ಮೀನು ಮಾರಾಟ ಮಳಿಗೆಗಳನ್ನು ಇಟ್ಟುಕೊಂಡು ವ್ಯಾಪಾರವನ್ನು ಮಾಡುತ್ತಾರೆ.

ಮೀನುಗಳನ್ನು ಖರೀದಿಸುವವರು ಸ್ಕೂಟರ್, ಕಾರುಗಳನ್ನು ರಸ್ತೆಗೆ ಹೊಂದಿಕೊಂಡಂತೆ ನಿಲ್ಲಿಸಿ ರಸ್ತೆಯಲ್ಲೇ ನಿಂತಿರುತ್ತಾರೆ. ಇದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಈ ಸ್ಥಳದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಹಾಗೂ ಪ್ರತಿದಿನ ಮೀನು ಮಾರಾಟ ಮಾಡುವ ಜಾಗದಲ್ಲಿ ಗಲಾಟೆಗಳೂ ನಡೆಯುತ್ತಿವೆ. ಅಲ್ಲದೇ ಈ ಮೀನು ಮಾರಾಟಗಾರರು ನದಿಗೆ ತ್ಯಾಜ್ಯ ಪದಾರ್ಥಗಳನ್ನು ಹಾಕುತ್ತಿರುವುದರಿಂದ ವಾತಾವರಣ ಕಲುಷಿತಗೊಂಡಿದೆ. ಆದ್ದರಿಂದ ಇಲ್ಲಿನ ಮೀನು ಮಾರಾಟ ಮಳಿಗೆಗಳನ್ನು ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕಿದೆ.

-ಮಹದೇವಮ್ಮ, ಕಟ್ಟೆಮಳಲವಾಡಿ, ಹುಣಸೂರು ತಾ

Tags:
error: Content is protected !!