ಮೈಸೂರು: ಸ್ವಾತಂತ್ರ್ಯ ದೊರೆತು ೭೫ ವರ್ಷಗಳು ಕಳೆದರೂ ನಾಗರಿಕ ಪ್ರಪಂಚದಿಂದ ದೂರವಿರುವು ದಲ್ಲದೆ, ಮೂಲಸೌಕರ್ಯಗಳ ಕೊರತೆ ಎದುರಿಸು ತ್ತಿರುವ ಬುಡಕಟ್ಟು ಸಮುದಾಯ ಗಳು ವಾಸಿಸುತ್ತಿರುವ ಹಾಡಿಗಳ ಸಮಗ್ರ ಅಭಿವೃದ್ಧಿಗಾಗಿ ರೂಪಿಸಿ ರುವ ಪ್ರಧಾನಮಂತ್ರಿ ಜನ್ ಜಾತೀಯ ಉನ್ನತ್ ಗ್ರಾಮ ಯೋಜನೆಯಡಿ ಜಿಲ್ಲೆಯ ೬೨ ಗ್ರಾಮಗಳು ಆಯ್ಕೆಯಾಗಿದೆ.
ಕೇಂದ್ರ ಸರ್ಕಾರದ ಈ ಯೋಜನೆಗೆ ಮೊದಲ ಹಂತದಲ್ಲಿ ಜಿಲ್ಲೆಯ ಎಚ್. ಡಿ. ಕೋಟೆ, ಸರಗೂರು, ಹುಣಸೂರು, ಮೈಸೂರು, ಪಿರಿಯಾಪಟ್ಟಣ, ನಂಜನ ಗೂಡು, ತಿ. ನರಸೀಪುರ ತಾಲ್ಲೂಕುಗಳಲ್ಲಿ ೬೨ ಗ್ರಾಮ ಗಳನ್ನು ಆಯ್ಕೆ ಮಾಡಿದ್ದು, ಮುಂದೆ ಮತ್ತಷ್ಟು ಹಾಡಿ ಗಳು, ಗ್ರಾಮಗಳನ್ನು ಪರಿಗಣಿಸುವ ಸಾಧ್ಯತೆ ಇದೆ. ಈ ಸಂಬಂಧ ಶೀಘ್ರದಲ್ಲೇ ಬುಡಕಟ್ಟು ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಶಿಕ್ಷಣ, ಆರೋಗ್ಯ , ಕೃಷಿ, ಕೌಶಲ ಅಭಿವೃದ್ಧಿ, ಉದ್ಯೋಗ, ಉತ್ಪಾದನೆ ಯಂತಹ ವಿವಿಧ ಕ್ಷೇತ್ರಗಳಲ್ಲಿನ ಅಂತರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆ ತಯಾರಾಗಲಿದೆ.
ಯೋಜನೆಯಡಿ ಪರಿಶಿಷ್ಟಪಂಗಡ ಹಾಡಿ,ಕಾಲೋನಿಗಳಲ್ಲಿ ಕಾರ್ಯ ಕ್ರಮಗಳನ್ನು ರೂಪಿಸಲು ಮತ್ತು ಅನುಷ್ಠಾನಗೊಳಿಸಲು ವಿವಿಧ ಇಲಾಖೆ ಗಳಿಂದ ಸರ್ವೆ ನಡೆಸಲಾಗುತ್ತದೆ. ಸಮೀಕ್ಷೆಯ ಸಂದರ್ಭದಲ್ಲಿ ಮೂಲ ಸೌಲಭ್ಯಗಳನ್ನು ಹೊಂದಿಲ್ಲದೆ ಇರುವ ಬಗ್ಗೆ ಮಾಹಿತಿಯನ್ನು ಕ್ರೋಢೀಕರಿ ಸಲಾಗುತ್ತದೆ. ಈ ಕೆಲಸಕ್ಕೆ ವಿವಿಧ ಇಲಾಖೆಗಳ ನೋಡಲ್ ಅಽಕಾರಿಗಳನ್ನು ನೇಮಿಸಲಾಗಿದ್ದು, ವಿಸ್ತೃತ ಯೋಜನಾ ವರದಿ ತಯಾರಿಸಿದ ಬಳಿಕ ಕೇಂದ್ರ ಸರ್ಕಾರಕ್ಕೆ ಕ್ರಿಯಾಯೋಜನೆಯನ್ನು ಸಲ್ಲಿಸಬೇಕಿದೆ.
೧೭ ಇಲಾಖೆಗಳ ಸಮನ್ವಯತೆ: ಇಲಾಖೆಗಳ ಸಮನ್ವಯತೆ ಇಲ್ಲದ ಕಾರಣ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿರಲಿಲ್ಲ. ಅನೇಕ ಯೋಜನೆಗಳಿಗೆ ಅನುದಾನ ಬಿಡುಗಡೆಯಾದರೂ ಕಾನೂನು ಮತ್ತು ತಾಂತ್ರಿಕ ಅಡಚಣೆಗಳನ್ನು ನಿವಾರಿಸಲಾಗದೆ ವಾಪಸ್ ಹೋಗುತ್ತಿತ್ತು. ಈ ಎಲ್ಲಾ ಗೊಂದಲ, ಸಮನ್ವಯತೆ ಕೊರತೆಗೆ ಕಡಿವಾಣ ಹಾಕಿರುವ ಕೇಂದ್ರ ಸರ್ಕಾರ ೧೭ ಇಲಾಖೆಗಳಿಗೆ ಪ್ರತ್ಯೇಕ ಜವಾಬ್ದಾರಿ ನೀಡಿ ೨೫ ಕಾರ್ಯಕ್ರಮಗಳನ್ನು ರೂಪಿಸುವಂತೆ ಹೇಳಿದೆ.
ಯಾವ ಯೋಜನೆಗಳು? : ಮುಂದಿನ ೨೦-೨೫ ವರ್ಷಗಳ ದೂರದೃಷ್ಟಿ, ಅಭಿವೃದ್ಧಿ ಕೋನವನ್ನು ಇಟ್ಟುಕೊಂಡು ಯೋಜನೆಗಳನ್ನು ರೂಪಿಸಬೇಕಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಜಲ್ ಜೀವನ್ ಮಿಷನ್, ಪರಿಷ್ಕರಿಸಿದ ವಿತರಣಾ ವಲಯ ಮತ್ತು ಸೌರ ವಿದ್ಯುತ್ ಯೋಜನೆ, ಉಜ್ವಲ ಯೋಜನೆ, ಅರಣ್ಯ ಹಕ್ಕು ಕಾಯ್ದೆ, ಪ್ರಧಾನಮಂತ್ರಿ ಜನ್ ಆರೋಗ್ಯ ಯೋಜನೆ, ನ್ಯಾಷನಲ್ ಹೆಲ್ತ್ ಮಿಷನ್, ನ್ಯಾಷನಲ್ ಸಿಕಲ್ ಸೆಲ್ ಮಿಷನ್, ಸಮಗ್ರ ಶಿಕ್ಷಾ ಅಭಿಯಾನ, ರಾಷ್ಟ್ರೀಯ ಜಾನುವಾರು ಮಿಷನ್, ರಾಷ್ಟ್ರೀಯ ಗ್ರಾಮ ಸ್ವರಾಜ್ ಅಭಿಯಾನ್, ಪ್ರಧಾನಮಂತ್ರಿ ಆದರ್ಶ ಗ್ರಾಮ, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಬಹುಯೋಜನೆಗಳು, ಅಂಗನವಾಡಿ ಸೇವೆ ಗಳು, ಟೆಲಿಕಾಂ ತಂತ್ರಜ್ಞಾನ ಅಭಿವೃದ್ಧಿ, ಸ್ವದೇಶ್ ದರ್ಶನ್, ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ, ಕೌಶಲ ಭಾರತ್ ಮಿಷನ್ ಯೋಜನೆಯಡಿ ಕಾರ್ಯಕ್ರಮಗಳನ್ನು ರೂಪಿಸಲು ಪ್ರಸ್ತಾವನೆ ತಯಾರಿಸಿ ಸಲ್ಲಿಸಬೇಕಿದೆ. ಕಂಬ ಇಲ್ಲದ ಗ್ರಾಮಗಳಿಗೆ ಸೋಲಾರ್: ವಿದ್ಯುತ್ ಕಂಬಗಳನ್ನು ಎಳೆಯಲು ಅರಣ್ಯ ಇಲಾಖೆ ತೊಡಕುಂಟು ಮಾಡಿರುವ ಹಾಡಿಗಳಿಗೆ ಸೋಲಾರ್ ಬೆಳಕಿನ ಸೌಲಭ್ಯಕ್ಕೆ ಯೋಜನೆ ರೂಪಿಸಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮುಂದಾಗಿದೆ. ಎಚ್. ಡಿ. ಕೋಟೆ, ಹುಣಸೂರು ತಾಲ್ಲೂಕುಗಳ ಕೆಲವು ಹಾಡಿಗಳಿಗೆ ವಿದ್ಯುತ್ ಕಂಬ ಅಳವಡಿಸಲು ಅರಣ್ಯ ಇಲಾಖೆ ಅನುಮೋದನೆ ನೀಡಿಲ್ಲ. ಹೀಗಾಗಿಯೇ, ಅಂತಹ ಹಾಡಿಗಳಿಗೆ ಸೋಲಾರ್ ದೀಪದ ವ್ಯವಸ್ಥೆ ಮಾಡಲಾಗುತ್ತದೆ.