ಮಂಡ್ಯ : ಜಿಲ್ಲೆಯ ಪ್ರಸಿದ್ದ ಸ್ಥಳವಾದ ಮೇಲುಕೋಟೆಯಲ್ಲಿ ತೆಲುಗು ಸಿನಿಮಾ ಚಿತ್ರತಂಡವು ಚಿತ್ರೀಕರಣಕ್ಕಾಗಿ ಪ್ರಾಚ್ಯ ಸ್ಮಾರಕವನ್ನೇ ಬಾರ್ ಆಗಿ ಪರಿವರ್ತಿಸಿದ ಘಟನೆ ನಡೆದಿದೆ.
ಈ ಮೂಲಕ ಐತಿಹಾಸಿಕ ಪಾರಂಪರೆ, ಸಂಸ್ಕೃತಿಗೆ ದಕ್ಕೆಯನ್ನುಂಟುಮಾಡಿದೆ.ಸಿನಿಮಾ ತಂಡ.
ಪಾರಂಪರಿಕ ಸ್ಥಳವಾದ ರಾಯಗೋಪುರದಲ್ಲಿ ಬಾರ್ ರೀತಿಯ ಸೆಟ್ ಹಾಕಿ ವಿವಿಧ ಬ್ರಾಂಡ್ ಮದ್ಯದ ಬಾಟಲಿಗಳನ್ನಿಟ್ಟು ಚಿತ್ರೀಕರಣ ಮಾಡಿರುವ ಬಗ್ಗೆ ಜನರು ಆರೋಪಿಸಿದ್ದಾರೆ.
ಈ ಚಿತ್ರದಲ್ಲಿ ನಾಯಕ ನಟನಾಗಿ ನಾಗಾರ್ಜುನ ಅವರ ಪುತ್ರ ನಾಗಚೈತನ್ಯ ಅವರು ನಟಿಸುತ್ತಿದ್ದು, ಈ ಸ್ಥಳಗಳಲ್ಲಿ 2 ದಿನಗಳ ಕಾಲ ಚಿತ್ರೀಕರಣವನ್ನು ಮಾಡಲು ಷರತ್ತು ಬದ್ದ ಅನುಮತಿಯನ್ನು ಜಿಲ್ಲಾಧಿಕಾರಿಗಳು ನೀಡಿದ್ದರು.
ಆದರೆ ಈ ಸಿನಿಮಾ ತಂಡವು ಸೆಟ್ ನಿರ್ಮಿಸಲು ಭಾರೀ ಗಾತ್ರದ ಕಬ್ಬಿಣದ ಕಂಬಗಳನ್ನು ಬಳಸಿದ್ದಲ್ಲದೆ ಅಲ್ಲಿಯ ನಿಯಮವನ್ನು ಉಲ್ಲಂಘಿಸಿದೆ. ಈ ಸಂಬಂಧ ಚಿತ್ರ ತಂಡಕ್ಕೆ ನೋಟಿಸ್ ನೀಡಲಾಗಿದ್ದು. ಚಿತ್ರೀಕರಣವನ್ನು ರದ್ದುಗೊಳಿಸಲಾಗಿದೆ.