Mysore
22
overcast clouds

Social Media

ಮಂಗಳವಾರ, 30 ಜೂನ್ 2026
Light
Dark

ಸ್ವಾತಂತ್ರ್ಯ ಹೋರಾಟಗಾರ್ತಿ ಕುಯಿಲಿ ಸಂಸ್ಮರಣೆ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಕುಯಿಲಿ ಅವರ ಸಂಸ್ಮರಣೆ ಕಾರ್ಯಕ್ರಮ ನಡೆಯಿತು.

ಪಟ್ಟಣದ ಪುರಸಭೆ ವೃತ್ತದಲ್ಲಿ ಅರುಂಧತಿಯ ಮಹಾಸಭಾ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕುಯಿಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕುಯಿಲಿ ಪರ ಘೋಷಣೆಗಳು ಮೊಳಗಿದವು. ಇದಕ್ಕೂ ಮುನ್ನ ಗಾಂಧಿನಗರದಿಂದ ಪುರಸಭೆ ವೃತ್ತದವರೆಗೆ ಕುಯಿಲಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.

ಅರುಂಧತಿ ಮಹಾಸಭಾ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಪುರಸಭೆ ವಾಜಿ ಅಧ್ಯಕ್ಷ ಆರ್.ಕೃಷ್ಣ ಮಾತನಾಡಿ, ಕುಯಿಲಿ ಅವರು ೧೬ನೇ ಶತಮಾನದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ. ಆರ್ಕಾಟ ನವಾಬನ ಜತೆ ಸೇರಿ ಬ್ರಿಟಿಷರು ನೀಡುತ್ತಿದ್ದ ಉಪಟಳವನ್ನು ತಪ್ಪಿಸಲು ಅರುಂಧತಿಯ ಸಮಾಜದ ಕುಯಿಲಿ ಯುದ್ಧ ಸಾಮಗ್ರಿಗಳನ್ನು ನಾಶ ಮಾಡಿ ಪ್ರಾಣಾರ್ಪಣೆ ಮಾಡಿದ್ದಾರೆ. ವಿಜಯದಶಮಿ ದಿನ ಅವರ ಬಲಿದಾನವಾಗಿದ್ದು, ಅವರ ನೆನಪಿಗಾಗಿ ಸರ್ಕಾರ ಇನ್ನು ಮುಂದೆ ವಿಜುಂದಶಮಿ ದಿನ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.

ಅರುಂಧತಿ ಮಹಾಸಭಾದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ರಂಗಸ್ವಾಮಿ, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ್, ಅರಕಲಗೂಡು ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು, ಕೆ.ಆರ್.ಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜು, ಕೊಡ್ಲಿಪೇಟೆ ರಂಗಸ್ವಾಮಿ, ಮಳವಳ್ಳಿ ನಾಗರಾಜು, ಮಹಿಳಾ ಘಟಕದ ಅಧ್ಯಕ್ಷರಾದ ಕೆ.ರೇಖಾ, ಮುಖಂಡರಾದ ಆರ್.ವಾದೇಶ್ವರ, ಸತೀಶ್, ಮಹೇಶ್, ವಿಜ್‌ಂ, ನವೀನ್, ರಾಜೇಶ್ವರಿ, ಚೆಲುವಮ್ಮ ಹಾಗೂ ಮಾದಮ್ಮ ಮತ್ತಿತರರು ಭಾಗವಹಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!