Mysore
32
overcast clouds

Social Media

ಮಂಗಳವಾರ, 16 ಜೂನ್ 2026
Light
Dark

ಹೆಚ್‌.ಡಿ.ಕೋಟೆ : ಹುಲಿ ದಾಳಿಗೆ ಹಸು ಬಲಿ

ಹೆಚ್.ಡಿ.ಕೋಟೆ: ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದುಹಾಕಿರುವ ಘಟನೆ ತಾಲ್ಲೂಕಿನ ಕೊತ್ತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮಾದೇಗೌಡ ಮತ್ತು ರವಿ ಎಂಬವರ ಜಮೀನಿನಲ್ಲಿ ಹಾಡಹಗಲೇ ಮೇಯುತ್ತಿದ್ದ ಹಸುವಿನ ಮೇಲೆ ಹುಲಿೊಂಂದು ದಾಳಿ ನಡೆಸಿ ತಿಂದು ಹಾಕಿದೆ. ಇದನ್ನು ಗಮನಿಸಿದ ರೈತ ಮಾದೇಗೌಡ, ರವಿ ಅವರು ಆತಂಕಗೊಂಡು ಅರಣ್ಯಾಧಿಕಾರಿಗೆ ವಿಚಾರ ತಿಳಿಸಿದಾಗ ಅರಣ್ಯಾಧಿಕಾರಿ ಸಿದ್ದರಾಜು ಭೇಟಿ ನೀಡಿ, ರೈತರುಗಳಿಗೆ ಆತಂಕ ಪಡುವುದು ಬೇಡ, ಹುಲಿ ಸೆರೆಗೆ ಬೋನು ಇಡಲಾಗುವುದು. ಪರಿಹಾರವನ್ನೂ ನೀಡಲಾಗುವುದು ಎಂದು ಧೈರ್ಯ ತುಂಬಿದರು. ಹುಲಿ ದಾಳಿಯಿಂದ ಅಕ್ಕಪಕ್ಕದ ರೈತರು ಮತ್ತು ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!