Mysore
25
scattered clouds

Social Media

ಮಂಗಳವಾರ, 18 ಆಗಸ್ಟ್ 2026
Light
Dark

ಸ್ಯಾಂಡಲ್‌ವುಡ್‌ನಲ್ಲಿ ಡಾಲಿ ದರ್ಬಾರ್

ಇಂದು ಜಮಾಲಿ ಗುಡ್ಡ; ಮುಂದಿನ ವಾರ ಮಾನ್ಸೂನ್ ರಾಗ ತೆರೆಗೆ

ಸ್ಯಾಂಡಲ್‌ವುಡ್‌ನಲ್ಲಿ ಈಗ ಡಾಲಿ ಧನಂಜಯ್ ಅವರ ಮೆರವಣಿಗೆ ನಡೆಯುತ್ತಿದೆ. ಸಾಲು ಸಾಲು ಸಿನಿಮಾಗಳು ತೆರೆಗೆ ಬರುತ್ತಿವೆ. ಘೋಷಣೆ ಆಗಿರುವ ಸಿನಿಮಾಗಳ ಪಟ್ಟಿ ದೊಡ್ಡದಿದ್ದು, ಹೆಚ್ಚಿನ ಚಿತ್ರಗಳು ಟ್ರೇಲರ್, ಸಾಂಗ್ಸ್, ಪೋಸ್ಟರ್‌ಗಳಿಂದ ಈಗಾಗಲೇ ನಿರೀಕ್ಷೆ ಹೆಚ್ಚಿಸಿವೆ.

ಇಂದು (ಸೆ.09) ಕುಶಾಲ್ ಗೌಡ ನಿರ್ದೇಶನದ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿ ಗುಡ್ಡ’ ಚಿತ್ರ ತೆರೆಗೆ ಬರುತ್ತಿದ್ದು, ಮುಂದಿನ ವಾರ ‘ಮಾನ್ಸೂನ್ ರಾಗ’. ಅದಾದ ಮೇಲೆ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ವಿಜಯ ಪ್ರಸಾದ್ ನಿರ್ದೇಶನದ, ಜಗ್ಗೇಶ್, ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ತೋತಾಪುರಿ’, ಅ. ೨೧ಕ್ಕೆ ಬೆಂಗಳೂರಿನ ಭೂಗತ ಲೋಕದ ಚರಿತ್ರೆ ಹೇಳುವ ಶೂನ್ಯ ನಿರ್ದೇಶನದ ‘ಹೆಡ್ ಬುಷ್’ ಹೀಗೆ ಸಾಲು ಸಾಲು ಚಿತ್ರಗಳ ಮೂಲಕ ಡಾಲಿ ಮೆರವಣಿಗೆ ನಡೆಯಲಿದೆ.

ಆ. ೨೩ರಂದು ಹುಟ್ಟುಹಬ್ಬ ಆಚರಿಸಿಕೊಂಡ ಧನಂಜಯ್ ಅಂದೇ ‘ಡಾಲಿ ಪಿಕ್ಚರ್ಸ್‌’ ಘೋಷಣೆ ಮಾಡಿ ವರ್ಷಕ್ಕೆ ಎರಡು ಸಿನಿಮಾ ನಿರ್ಮಾಣ ಮಾಡುವ ಭರವಸೆ ನೀಡಿದರು. ಅದೇ ವೇಳೆಗೆ ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿಬರಲಿರುವ ‘ಉತ್ತರಕಾಂಡ’ ಚಿತ್ರದ ಘೋಷಣೆಯೂ ಆಯಿತು. ಇದೀಗ ವಿಜಯ್ ಎನ್. ನಿರ್ದೇಶನದಲ್ಲಿ ‘ಹೊಯ್ಸಳ’ ಚಿತ್ರದ ಪೋಸ್ಟರ್ ಲಾಂಚ್ ಆಗಿದ್ದು ೨೦೨೩ರ ಮಾರ್ಚ್ ೩೦ಕ್ಕೆ ಬಿಡುಗಡೆಗೆ ಅಣಿಯಾಗುತ್ತಿದೆ.

ಇಂದು ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ತೆರೆಗೆ

ನಿಹಾರಿಕಾ ಪ್ರೊಡಕ್ಷನ್ಸ್ ಅಡಿಯಲ್ಲಿ ಶ್ರೀಹರಿ ನಿರ್ಮಿಸಿರುವ, ಕುಶಾಲ್ ಗೌಡ ನಿರ್ದೇಶಿಸಿರುವ ‘ಒನ್ಸ್ ಅಪಾನ್ ಅ ಟೈಮ್ ಇನ್ ಜಮಾಲಿಗುಡ್ಡ’ ಚಿತ್ರದಲ್ಲಿ ಡಾಲಿಗೆ ಅದಿತಿ ಪ್ರಭುದೇವ ಜೊತೆಯಾಗಿದ್ದು, ಪ್ರಕಾಶ್ ಬೆಳವಾಡಿ, ಯಶ್ ಶೆಟ್ಟಿ, ಭಾವನಾ ರಾಮಣ್ಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾರ್ತಿಕ್ ಛಾಯಾಗ್ರಹಣ, ಅರ್ಜುನ ಜನ್ಯ ಸಂಗೀತ ಚಿತ್ರಕ್ಕಿದೆ.

ಇನ್ನು ಮುಂದಿನ ವಾರ ತೆರೆಗೆ ಬರಲಿರುವ ‘ಮಾನ್ಸೂನ್ ರಾಗ’ ಚಿತ್ರದಲ್ಲಿ ಧನಂಜಯ್‌ಗೆ ರಚಿತಾ ರಾಮ್ ಜೋಡಿ. ಎಸ್. ರವೀಂದ್ರನಾಥ್ ನಿರ್ದೇಶನದ ಚಿತ್ರವನ್ನು ವಿಖ್ಯಾತ್ ಎ.ಆರ್. ನಿರ್ಮಾಣ ಮಾಡಿದ್ದಾರೆ. ಎಸ್.ಕೆ.ರಾವ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿರುವ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಯಶಾ ಶಿವಕುಮಾರ್, ಸುಹಾಸಿನಿ, ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಅಗ್ನಿ ಶ್ರೀಧರ್ ಅವರ ‘ದಾದಾಗಿರಿ ದಿನಗಳು’ ಕಾದಂಬರಿ ಆಧಾರಿತ ಸಿನಿಮಾ ‘ಹೆಡ್ ಬುಷ್’ ಬೆಂಗಳೂರಿನ ಭೂಗತ ಪಾತಕಿಯಾಗಿದ್ದ ‘ಎಂ.ಪಿ.ಜಯರಾಜ್’ ಜೀವನಾಧಾರಿತವಾಗಿದ್ದು ಶೂನ್ಯ ಸಾರಥ್ಯ ವಹಿಸಿದ್ದಾರೆ. ಅಶು ಬೇದ್ರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ಚರಣ್‌ರಾಜ್ ಸಂಗೀತವಿದ್ದು, ಪ್ರೊಫೆಸರ್ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಕಾಣಿಸಿಕೊಂಡಿದ್ದಾರೆ.

ಈಗ ಪೋಸ್ಟರ್ ಮೂಲಕ ಗಮನ ಸೆಳೆದಿರುವ ‘ಹೊಯ್ಸಳ’ ಚಿತ್ರವನ್ನು ಕೆ.ಆರ್.ಜಿ ಸ್ಟುಡಿೋಂಸ್ ಲಾಂಛನದಲ್ಲಿ ಕಾರ್ತಿಕ್ ಗೌಡ ಹಾಗೂ ೋಂಗಿ ಜಿ ರಾಜ್ ನಿರ್ಮಿಸುತ್ತಿದ್ದಾರೆ. ಅಮೃತ ಅಯ್ಯಂಗಾರ್ ಚಿತ್ರದ ನಾಯಕಿಯಾಗಿದ್ದು, ಅಚ್ಯುತಕುಮಾರ್, ಪ್ರತಾಪ್ ನಾರಾಯಣ್, ನವೀನ್ ಶಂಕರ್, ಅವಿನಾಶ್ ಕೆ.ಜಿ.ಎಫ್, ರಾಘು ಶಿವಮೊಗ್ಗ ತೆರೆ ಹಂಚಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!