Mysore
22
overcast clouds

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಓದುಗರ ಪತ್ರ: ಪ್ರಕೃತಿ ಪ್ರೀತಿ ಅತಿಮುಖ್ಯ

dgp murder case

ಇಂದಿನ ಧಾವಂತದ ಬದುಕಿನಲ್ಲಿ ನಾವೆಲ್ಲರೂ ಆಸೆಗಳ ಬೆನ್ನೇರಿ ಓಡುತ್ತಿದ್ದು, ನಮ್ಮ ಉಸಿರಿಗೆ ಆಧಾರವಾಗಿರುವ ಪ್ರಕೃತಿಯನ್ನು ಮರೆಯುತ್ತಿದ್ದೇವೆ. ಗಾಳಿ, ನೀರು, ಬೆಳಕಿಲ್ಲದೆ ಕ್ಷಣವೂ ಬದುಕಲಾರದ ನಾವು, ಅಹಂಕಾರದ ಭರಾಟೆಯಲ್ಲಿ ಪ್ರಕೃತಿಯನ್ನು ಕಡೆಗಣಿಸುತ್ತಿರುವುದರ ಪರಿಣಾಮವೇ ಇಂದಿನ ಬರಗಾಲದ ಸೂಚನೆ.

ಮತ್ತೊಂದೆಡೆ, ಸಮಾಜದಲ್ಲಿ ಹೆಚ್ಚುತ್ತಿರುವ ಕೊಲೆ, ಸುಲಿಗೆಗಳಂತಹ ಕೃತ್ಯಗಳು ನಮ್ಮ ಆಂತರಿಕ ಮೌಲ್ಯಗಳ ಕುಸಿತಕ್ಕೆ ಸಾಕ್ಷಿಯಾಗಿವೆ. ನಾನೇ ಎಲ್ಲ ಎಂಬ ಭ್ರಮೆ ನಮ್ಮಲ್ಲಿ ಮೂಡಿದಾಗ ಮಾನವೀಯತೆ ನಾಶವಾಗುತ್ತದೆ. ತಂದೆ-ತಾಯಿ, ಗುರುಹಿರಿಯರು ಮತ್ತು ಸಮಾಜವನ್ನು ಗೌರವಿಸುವ ಗುಣ ನಮ್ಮಲ್ಲಿರಬೇಕು. ಪ್ರಕೃತಿಯನ್ನು ನಾವು ಕಾಪಾಡಿದರೆ, ನಾಳೆ ಅದು ನಮ್ಮನ್ನು ಕಾಪಾಡುತ್ತದೆ. ಗಿಡಗಳನ್ನು ನೆಟ್ಟು ಪೋಷಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ. ಮುಂದಿನ ಪೀಳಿಗೆಗೆ ನಾವು ನೀಡಬೇಕಾದ ಅತಿದೊಡ್ಡ ಆಸ್ತಿ ಹಣವಲ್ಲ, ಬದಲಾಗಿ ಪರಿಸರ ಪ್ರe ಮತ್ತು ಸಂಸ್ಕಾರ. ಈ ಸುಂದರ ಬದುಕಿನಲ್ಲಿ ದ್ವೇಷಕ್ಕೆ ಜಗವಿಲ್ಲ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಾ, ಅಹಂಕಾರವಿಲ್ಲದೆ ಪ್ರೀತಿ ಮತ್ತು ಕೃತಜ್ಞತೆಯಿಂದ ಬದುಕಿದಾಗ ಮಾತ್ರ ನಮಗೆ ನಿಜವಾದ ಶಾಂತಿ ಹಾಗೂ ಸಾರ್ಥಕತೆ ಲಭಿಸಲು ಸಾಧ್ಯ.

– ಬಿ. ಗಣೇಶ , ಮೈಸೂರು

Tags:
error: Content is protected !!