ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ನಾಡಹಬ್ಬ ದಸರಾ ೧೬೧೦ ರಲ್ಲಿ ಪ್ರಾರಂಭವಾಗಿ, ಇಲ್ಲಿನ ಸಂಸ್ಕೃತಿಗಳನ್ನು ಅಳವಡಿಸಿಕೊಂಡು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.ಇತ್ತೀಚಿನ ವರ್ಷಗಳಲ್ಲಿ ಎಲ್ಲ ಜಿಗಳಲ್ಲಿ ದಸರಾ ಆಚರಣೆ ಮಾಡುತ್ತಿದ್ದರೂ (ದಸರಾ ಎಂದರೆ ಮೈಸೂರು,ಮೈಸೂರು ಎಂದರೆ ದಸರಾ) ತನ್ನ ವೈಭವನ್ನು ಉಳಿಸಿಕೊಂಡು ದೇಶ, ವಿದೇಶಗಳಿಂದ ಜನರನ್ನು ಆಕರ್ಷಿಸುತ್ತಿರುವುದು ಮೈಸೂರು ದಸರಾದ ವಿಶೇಷತೆ.
ಕಂಬಳ ದಕ್ಷಿಣ ಕನ್ನಡದ ಜನತೆಯ ಮನಸ್ಸಿನಲ್ಲಿ ಹಾಸು ಹೊಕ್ಕಾಗಿರುವ ಜನಪ್ರಿಯ (ಕಂಬಳ ಎಂದರೆ ದಕ್ಷಿಣ ಕನ್ನಡ, ದಕ್ಷಿಣ ಕನ್ನಡ ಎಂದರೆ ಕಂಬಳ) ಜನಪದ ಕ್ರೀಡೆಯಾಗಿ ಸುಮಾರು ೮೦೦ ವರ್ಷಗಳಿಂದ ಸಾಂಪ್ರದಾಯಿಕವಾಗಿ ಆಚರಿಸುತ್ತಾ ಬಂದು ವಿಶೇಷ ಮನ್ನಣೆಯನ್ನು ಪಡೆದಿದೆ. ಆದರೆ ಮೈಸೂರಿನಲ್ಲಿ ಸಮೃದ್ಧವಾಗಿ ಬೆಳೆದು ನಿಂತಿರುವ ಮರಗಳನ್ನು ಕಡಿದು ಕಂಬಳ ಕ್ರೀಡೆಯನ್ನು ಮಾಡುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ.
ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ನಡೆಸುವುದಕ್ಕೆ ಪರಿಸರವಾದಿಗಳು, ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಜನಸಾಮಾನ್ಯರು, ಕಂಬಳ ಕ್ರೀಡೆ ಆಚರಿಸುವುದರಿಂದ ಹಿಂದೆ ಸರಿದು,ಕಂಬಳ ಕ್ರೀಡೆಯ ಸ್ತಬ್ಧಚಿತ್ರ ಮಾಡಿ, ಗೌರವ ಸಲ್ಲಿಸುವುದರ ಮೂಲಕ ಸರಳ ದಸರಾ (ಮಳೆ ಇಲ್ಲದ ಕಾರಣ) ಆಚರಣೆ ಮಾಡಬೇಕೆಂದು ಆಗ್ರಹಿಸಿರುವುದು ಸಮ್ಮತವಾದದ್ದು.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು



