ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡುವ ಮೊದಲು ಮತ್ತೊಮ್ಮೆ ಅದರ ಸಾಧಕ ಬಾಧಕಗಳ ಬಗ್ಗೆ ಯೋಚಿಸಿ ಮುಂದುವರಿಯುವುದು ಒಳ್ಳೆಯದು.
ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರು ಡಿನೋಟಿಫಿಕೇಷನ್ ಮಾಡಿದರು. ಮುಂದುವರಿದು ಮಾಜಿ ಮುಖ್ಯಮಂತಿ ಬಿ.ಎಸ್.ಯಡಿಯೂರಪ್ಪ ಅವರು ಅದನ್ನು ಮುಂದುವರಿಸಿದರು. ನಾನು ಈಗ ಅದನ್ನು ಮುಂದುವರಿಸಿ(ಬಹುಪಾಲು ರೈತರ ವಿರೋಧವಿದ್ದರೂ)ಬಿಡದಿ ಟೌನ್ ಶಿಪ್ ಮಾಡುತ್ತೇನೆ ಎಂದು ಹೇಳಿರುವುದು ರೈತರನ್ನು ವಿಚಲಿತಗೊಳಿಸಿದೆ.
ಬಿಡದಿ ಸುತ್ತ ಮುತ್ತ ವ್ಯವಸಾಯಕ್ಕೆ ಯೋಗ್ಯವಾದ ಫಲವತ್ತಾದ ಭೂಮಿ ಇರುವುದರಿಂದ ರೈತರ ಜೀವನೋಪಾಯಕ್ಕೆ ಹೇಳಿಮಾಡಿಸಿದ ಹಾಗಿದೆ. ಸರ್ಕಾರ ಇಲ್ಲಿ ಒಂದು ಎಕರೆ ಜಮೀನಿಗೆ ೨ ಕೋಟಿ ೪೦ ಲಕ್ಷ ರೂಪಾಯಿ ಮತ್ತು ಒಂದು ಗುಂಟೆ ಜಮೀನು ಇರುವ ಮಾಲೀಕರಿಗೆ ೫ ಲಕ್ಷ ರೂಪಾಯಿ ಪರಿಹಾರ ನೀಡಿದ ನಂತರ ಬಂದ ಹಣ ರೈತರ ಬಳಿ ಎಷ್ಟು ದಿನ ಉಳಿದೀತು? ಜಮೀನು ಕಳೆದುಕೊಂಡ ರೈತರ ಪಾಡೇನು? ಅವರು ಜೀವನ ನಡೆಸಲು ಮುಂದೆ ಏನು ಮಾಡಬೇಕು ಎಂಬುದು ಪ್ರಶ್ನೆಯಾಗಿದೆ. ಇನ್ನೂ ಕಾಲ ಮಿಂಚಿಲ್ಲ ಮುಖ್ಯಮಂತ್ರಿಗಳು ಸರ್ವಪಕ್ಷಗಳ,ರೈತಪ್ರತಿನಿಧಿಗಳ, ಪರಿಸರ ತಜ್ಞರುಗಳ, ಸಭೆ ಕರೆದು ಚರ್ಚಿಸಿ ನಂತರ ಒಮ್ಮತದ ತೀರ್ಮಾನಕ್ಕೆ ಬರುವುದು ಎಲ್ಲ ದೃಷ್ಟಿಯಿಂದಲೂ ಒಳ್ಳೆಯ ಬೆಳವಣಿಗೆ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು


