Mysore
29
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಹಾಸನ| 4 ವರ್ಷಗಳ ಬಳಿಕ ಚನ್ನಕೇಶವಸ್ವಾಮಿ ಮೂಲ ವಿಗ್ರಹ ಸ್ಪರ್ಶಿಸಿದ ಸೂರ್ಯ ರಶ್ಮಿ: ಭಕ್ತರ ಹರ್ಷೋದ್ಘಾರ

ಹಾಸನ: ವಿಶ್ವವಿಖ್ಯಾತ ಶ್ರೀ ಚನ್ನಕೇಶವಸ್ವಾಮಿ ಮೂಲ ವಿಗ್ರಹವನ್ನು ಸೂರ್ಯ ರಶ್ಮಿ 2021ರಲ್ಲಿ ಸ್ಪರ್ಶಿಸಿತ್ತು. ಅದಾದ ಬಳಿಕ ಇಂದು ಅಂದರೆ 4 ವರ್ಷಗಳ ಬಳಿಕ ಸೂರ್ಯನ ರಶ್ಮಿ ಮತ್ತೊಮ್ಮೆ ಸ್ಪರ್ಶ ಮಾಡಿದೆ.

ಕಳೆದ 2021ರಲ್ಲಿ ದೇವಾಲಯ ಪ್ರವೇಶ ಮಾಡಿದ್ದ ಸೂರ್ಯನ ರಶ್ಮಿ, 2024ರ ತನಕ ಸ್ಪರ್ಶ ಮಾಡಿರಲಿಲ್ಲ. ಮಳೆ, ಮೋಡ ಕವಿದ ವಾತಾವರಣದಿಂದ ವಿಗ್ರಹದ ಮೇಲೆ ಸೂರ್ಯನ ರಶ್ಮಿ ಬೀಳಲು ಅಡ್ಡಿ ಉಂಟಾಗಿತ್ತು. ಈ ವರ್ಷ ಅಡೆತಡೆ ನಿವಾರಣೆಯಾಗಿದ್ದು, ಭಕ್ತರಲ್ಲಿ ಸಾರ್ಥಕದ ಕ್ಷಣ ಮನೆ ಮಾಡಿದೆ.

ಇಂದು ಬೆಳಿಗ್ಗೆ 6 ಗಂಟೆ 15 ನಿಮಿಷಕ್ಕೆ ಶ್ರೀ ಚನ್ನಕೇಶವಸ್ವಾಮಿ ಮೂಲ ವಿಗ್ರಹದ ಮೇಲೆ ಬಿದ್ದ ಸೂರ್ಯನ ರಶ್ಮಿ, 6 ಗಂಟೆ 42 ನಿಮಿಷಕ್ಕೆ ನವರಂಗ ದ್ವಾರ ದಾಟಿ ಹೋದ ಸೂರ್ಯನ ರಶ್ಮಿಗಳು ದೇವರ ವಿಗ್ರಹದ ಮೇಲೆ ಬೀಳುವುದನ್ನು ನೂರಾರು ಭಕ್ತರು ಕಣ್ತುಂಬಿಕೊಂಡರು.

ಸೂರ್ಯನ ರಶ್ಮಿ ಶ್ರೀ ಚನ್ನಕೇಶವಸ್ವಾಮಿ ವಿಗ್ರಹ ಸ್ಪರ್ಶಿಸುತ್ತಿದ್ದಂತೆ ಗರ್ಭಗುಡಿ ಬಂದ್‌ ಮಾಡಲಾಯಿತು.

ಪ್ರತಿ ವರ್ಷ ಜಾತ್ರೆ ಮುಗಿದ ನಂತರ ಶ್ರೀ ಚನ್ನಕೇಶವಸ್ವಾಮಿ ದೇವಾಲಯ ಪ್ರವೇಶಿಸುವ ಸೂರ್ಯನ ರಶ್ಮಿ ಬೀಳುವುದನ್ನು ಕಂಡ ಭಕ್ತರು ಕೃತಾರ್ಥರಾದರು.

Tags:
error: Content is protected !!