Mysore
31
few clouds

Social Media

ಶನಿವಾರ, 25 ಏಪ್ರಿಲ 2026
Light
Dark

ಕಾವೇರಿ ನದಿಯಲ್ಲಿ ಆರು ಜನ ಸಾವು ; ಸಾವಿಗೀಡಾದವರೆಲ್ಲರೂ ಒಂದೇ ಕುಟುಂಬದವರು

ಕೆ.ಆರ್.ನಗರ : ತಾಲ್ಲೂಕಿನ ಹೊರವಲಯದ ಅರ್ಕೇಶ್ವರ ದೇಗುಲ ಬಳಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ಸಾವನ್ನಪ್ಪಿದ ಆರು ಮಂದಿಯೂ ಒಂದೇ ಕುಟುಂಬದವರು ಎಂದು ತಿಳಿದುಬಂದಿದೆ.

ಮೃತರಿಗೆ ಕೆ.ಆರ್.ನಗರದಲ್ಲಿ ಸಂಬಂಧಿಕರು ಇದ್ದು, ನಿನ್ನೆ ಮತ್ತು ಇಂದು ದರ್ಗಾ ಉರುಸ್ ಜಾತ್ರೆ ಇದ್ದ ಕಾರಣ ಅಲ್ಲಿಗೆ ಹೋಗಿದ್ದರು. ಜಾತ್ರೆ ನೋಡಿಕೊಂಡು ನಂತರ ನದಿಗೆ ಹೋಗಿ ಈಜಾಡಲು ಹೋಗಿದ್ದಾರೆ. ಈ ವೇಳೆ ಏಕಾಏಕಿ ನೀರಿನ ಪ್ರಮಾಣ ಹೆಚ್ಚಳವಾಗಿ, ನೀರಿನ ಆಳದಲ್ಲಿ ಹೂಳು ಇದ್ದ ಕಾರಣ ಹೊರ ಬಾಲದೇ ನೀರಿನಲ್ಲಿ ಮುಳುಗುವ ಆತಂಕ ಎದುರಾಗುತ್ತದೆ. ಇದರಿಂದ ಒಬ್ಬರನ್ನ ಎಳೆಯಲು ಹೋಗಿ ಕುಟುಂಬದ ಒಬ್ಬೊಬ್ಬರೇ ನೀರಿಗೆ ಸಿಲುಕಿ ಒಂದೇ ಕುಟುಂಬದ ಆರು ಜನರು ಸಾವನ್ನಪ್ಪಿದ್ದಾರೆ ಎಂದು ಮೃತ ಸಂಬಂಧಿಕ ಮೊಹಮ್ಮದ್ ಸಾಲಿಕ್ ಸೇಠ್ ಆಂದೋಲನಕ್ಕೆ ಮಾಹಿತಿ ನೀಡಿದರು.

Tags:
error: Content is protected !!