Mysore
31
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಪ್ರವಾಸಿಗರ ಆಕರ್ಷಣೆಯ ಭದ್ರಾದ ಕಪ್ಪು ಚಿರತೆ

ಚಿಕ್ಕಮಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದು, ವಿಶ್ವದಾದ್ಯಂತ ಇರುವ ವನ್ಯಜೀವಿಪ್ರಿಯರನ್ನು ತನ್ನತ್ತ ಸೆಳೆಯುವಲ್ಲಿ ನಾಗರಹೊಳೆಯ ಕಬಿನಿಯ ಭಗೀರ ಯಶಸ್ವಿಯಾಗಿದ್ದ ನಂತರ ಈಗ ಚಿಕ್ಕಮಗಳೂರಿನ ಭದ್ರಾದ ಅರಣ್ಯದ ಲಕ್ಕವಳ್ಳಿ ಸಫಾರಿ ವೇಳೆ ಕಪ್ಪು ಚಿರತೆ ಹೆಚ್ಚಾಗಿ ಕಾಣಿಸಿಕೊಳ್ಳುವ ಮೂಲಕ, ವನ್ಯಜೀವಿ ಪ್ರಿಯರನ್ನು ಸೆಳೆಯುತ್ತಿದೆ.

ಹೌದು, ಚಿಕ್ಕಮಗಳೂರಿನ ಭದ್ರಾದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಈಗ ಕರಿಚಿರತೆಯೇ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಭದ್ರಾದಲಕ್ಕವಳ್ಳಿ ಬೋಟ್ ಸಫಾರಿ ಹಾಗೂ ಜೀಪ್ ಸಫಾರಿಯ ವೇಳೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಈ ಕಪ್ಪು ಚಿರತೆ ನೋಡಲು ಇದೀಗಾ ದೇಶ ವಿದೇಶಗಳಿಂದ ಪ್ರವಾಸಿಗರ ದಂಡೇ ಭದ್ರಗೆ ಹರಿದು ಬರುತ್ತಿದೆ.

ಬೆಂಗಳೂರು ಮೂಲದ ಅರವಿಂದ್ ಕಾರ್ತಿಕ್ ಎಂಬುವವರು ಈ ಅಪರೂಪದ ಕಪ್ಪುಚಿರತೆಯ ಚಿತ್ರಗಳನ್ನು ಸೆರೆಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕಪ್ಪು ಚಿರತ ತನ್ನ ಕುಟುಂಬದೊಂದಿಗೆ ಸಿಗುತ್ತಿರುವುದು ಅಪರೂಪವಾಗಿದೆ. ತಾಯಿ ಚಿರತೆ ಮತ್ತು ಎರಡು ಮರಿಗಳು ಒಟ್ಟಾಗಿ ಕಾಣಿಸುತ್ತಿದ್ದು, ಈ ಎರಡು ಮರಿಗಳ ಪೈಕಿ ಒಂದು ಕಪ್ಪು ಚಿರತೆಯಾಗಿದೆ. ಚಿರತೆ ಮತ್ತು ಕಪ್ಪು ಚಿರತೆಯನ್ನು ಒಟ್ಟಾಗಿ ನೋಡುವುದೇ ಒಂದು ಅದೃಷ್ಟ ಎಂದು ಆಂದೋಲನದೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಸದ್ಯ ಈಗ ಕಪ್ಪು ಚಿರತೆ ಮತ್ತು ಅದರ ಸಹೋದರ ಚಿರತೆ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ಅವುಗಳ ಚೆನ್ನಾಟವನ್ನ ಪ್ರವಾಸಿಗರು ಸೆರೆ ಹಿಡಿದು, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Tags:
error: Content is protected !!