Mysore
22
moderate rain

Social Media

ಮಂಗಳವಾರ, 15 ಸೆಪ್ಟೆಂಬರ್ 2026
Light
Dark

ಅಕಾಲಿಕ ಮಳೆಯಿಂದ ಒಣ ಮರ ಬಿದ್ದು ದೇಗುಲ ಹಾನಿ

ವಿರಾಜಪೇಟೆ: ಅಕಾಲಿಕ ಮಳೆಯ ಪರಿಣಾಮ ಒಣಗಿದ ಮರ ದೇಗುಲದ ಕಟ್ಟಡ ದ ಮೇಲೆ ಬಿದ್ದು ಹಾನಿಯಾಗಿರುವ ಘಟನೆ ವಿರಾಜಪೇಟೆ ತೆಲುಗರಬೀದಿ ನಡೆದಿದೆ.

ವಿರಾಜಪೇಟೆ ನಗರದ ತೆಲುಗರ ಬೀದಿಯ ಶ್ರೀ ಮಧುರೈ ವೀರನ್ ಸ್ವಾಮಿ ದೇಗಲದ ಆವರಣದಲ್ಲಿರುವ ಕಟ್ಟಡದ ಮೇಲೆ ಸನೀಹದ ಸ್ಥಳದಲ್ಲಿದ್ದ ಒಣಗಿದ ಬೀಟಿ ಮರ ಒಂದು ಬಿದ್ದು ಹಾನಿಯಾಗಿದೆ.

ಫೆಬ್ರವರಿ.25ರ ಬುಧವಾರ ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ಒಂದೇ ಸಮನೆ ಮಳೆಯು ಸುರಿದಿದೆ. ಈ ಸಂಧರ್ಭದಲ್ಲಿ ದೇಗುಲದ ಆವರಣಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ಬಹುಕಾಲದಿಂದ ಒಣಗಿ ನಿಂತ ಬೀಟಿ ಮರೊಂದಿತ್ತು. ಮಳೆಯ ಕಾರಣ ಮಣ್ಣು ಸಡಿಲಗೊಂಡು ದೇಗುಲ ಆವರಣದ ಕಟ್ಟಡ ಮೇಲೆ ಬಿದ್ದು ಕಟ್ಟಡ ದ ಮೇಲ್ಚಾವಣಿ ಸೇರಿದಂತೆ ತಡೆಗೋಡೆ ಹಾನಿಯಾಗಿದೆ.

ದೇಗುಲದ ಆಡಳಿತ ಮಂಡಳಿ ಮರಬಿದ್ದು ಹಾನಿಯಾಗಿರುವ ಕಟ್ಟಡಕ್ಕೆ ಪರಿಹಾರ ಮತ್ತು ಮರವನ್ನು ತೆರವುಗೊಳಿಸುವಂತೆ ಕೋರಿ ಸಂಭಂಧಿಸಿದ ಇಲಾಖೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

Tags:
error: Content is protected !!