Mysore
29
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಓದುಗರ ಪತ್ರ: ಸಿಗ್ನಲ್‌ನಲ್ಲಿ ವಾಹನಗಳ ಎಂಜಿನ್ ಆಫ್ ಮಾಡಿ

ಪ್ರತಿನಿತ್ಯ ನಗರದ ವಿವಿಧ ವೃತ್ತಗಳ ಸಿಗ್ನಲ್ ಬಳಿ ಕಾಯುವ ವಾಹನ ಸವಾರರು ೧೦೦ ಸೆಕೆಂಡಿಗಿಂತಲೂ ಹೆಚ್ಚು ಕಾಲ ನಿಂತರೆ ನಮ್ಮ ವಾಹನದ ಎಂಜಿನ್ ಸ್ವಿಚ್ ಆಫ್ ಮಾಡಿ ಗ್ರೀನ್ ಸಿಗ್ನಲ್ ಬರುವ ೫ ಅಥವಾ ೧೦ ಸೆಕೆಂಡಿನಲ್ಲಿ ಮತ್ತೆ ಚಾಲನೆ ಮಾಡುವುದು ಅಗತ್ಯ.

ಇದರಿಂದ ಇಂಧನ ಉಳಿತಾಯವಾಗುತ್ತದೆ. ಎಂಜಿನ್ ಹೊಗೆ ಕಡಿಮೆ ಆಗಿ ಸುತ್ತಲಿನ ಪರಿಸರ ಎಂಜಿನ್ ಹೊಗೆಯಮಾಲಿನ್ಯದಿಂದ ಮುಕ್ತವಾಗುತ್ತದೆ. ಸಿಗ್ನಲ್ ಬಳಿ ಕಾಯುವಾಗ ಸವಾರರು ವಾಹನಗಳ ಹೊಗೆಯ ಸೇವನೆ ಮಾಡುವುದು ತಪ್ಪುತ್ತದೆ. ಶಬ್ದ ಮಾಲಿನ್ಯವೂ ಕಡಿಮೆ ಆಗುತ್ತದೆ.

ಈ ನಿಯಮವನ್ನು ಎಲ್ಲಾ ನಗರ ಪ್ರದೇಶಗಳಲ್ಲಿ ಅನುಸರಿಸಿದಲ್ಲಿ ಆಗುವ ಇಂಧನ ಉಳಿತಾಯ ಅಗಾಧ. ವಾಹನದಲ್ಲಿ ಪಯಣಿಸುವವರಿಗೆ ವಾಯು ಮಾಲಿನ್ಯದಿಂದ ರಕ್ಷಣೆಯೂ ದೊರೆಯುತ್ತದೆ. ಈ ನಿಟ್ಟಿನಲ್ಲಿ ತಜ್ಞರು ಗಮನ ಹರಿಸಬೇಕು.

 -ಲಕ್ಷ್ಮಣ್ ಗೊರ್ಲಕಟ್ಟೆ, ಗದ್ದಿಗೆ ರಸ್ತೆ, ಮೈಸೂರು

Tags:
error: Content is protected !!