Mysore
26
scattered clouds

Social Media

ಶುಕ್ರವಾರ, 17 ಏಪ್ರಿಲ 2026
Light
Dark

ಕೊಲೆ | ಶವವನ್ನು ಪಾಳು ಮನೆ ಮುಂದೆ ಎಸೆದು ಹೋದ ದುಷ್ಕರ್ಮಿ

Land dispute: Fatal attack on a person

ಮಳವಳ್ಳಿ : ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಶವವನ್ನು ಆತನ ಪಾಳು ಮನೆ ಮುಂದೆ ಎಸೆದು ಹೋಗಿರುವ ದುಷ್ಕೃತ್ಯವೊಂದು ಮಳವಳ್ಳಿ ತಾಲ್ಲೂಕಿನ ಅಕ್ಕಮ್ಮನ ಕೊಪ್ಪಲು ಗ್ರಾಮದಲ್ಲಿ ಜರುಗಿದೆ.

ಮೂಲತಃ ಅಕ್ಕಮ್ಮನಕೊಪ್ಪಲು ಗ್ರಾಮದ ವಾಸಿಯಾಗಿದ್ದು ಪ್ರಸ್ತುತ ಬನ್ನೂರಿನಲ್ಲಿ ತನ್ನ ಕುಟುಂಬ ಸಮೇತ ವಾಸವಿರುವ ವೀರಭದ್ರಪ್ಪ ಎಂಬುವರ ಮಗನಾದ 44 ವರ್ಷದ ಮಂಜು ಎಂಬಾತನೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಭಾನುವಾರ ಸಂಜೆ 9.30 ರ ಸಮಯದಲ್ಲಿ ಹುಲ್ಲೇಗಾಲ ಗ್ರಾಮದ ಪರಿಚಯದವರೊಬ್ಬದ ಗೃಹ ಪ್ರವೇಶ ಕಾರ್ಯಕ್ಕೆ ಬಂದಿದ್ದ ಈತನನ್ನು ಯಾರೋ ದುಷ್ಕರ್ಮಿ ಗಳು ರಾತ್ರಿಯೇ ಕೊಲೆ ಮಾಡಿ ಶವವನ್ನು ಆತನ ಪಾಳು ಮನೆಯ ಜಗುಲಿ ಮೇಲೆ ಹಾಕಿ ಹೋಗಿದ್ದಾರೆ ಎನ್ನಲಾಗಿದೆ, ಇಂದು ಬೆಳಿಗ್ಗೆ ಗ್ರಾಮಸ್ಥರು ಮನೆ ಮುಂದೆ ಶವ ಬಿದ್ದಿರುವುದನ್ನು ಕಂಡು ಪೊಲೀಸ ರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿರುವ ಗ್ರಾಮಾಂತರ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮುಖ ತಲೆ ಭಾಗದಲ್ಲಿ ಹಲ್ಲೆ ನಡೆಸಿರುವ ರಕ್ತದ ಗಾಯಗಳಾಗಿದ್ದು ಜೊತೆಗೆ ನಿಕ್ಕರ್ ವೊಂದನ್ನು ಬಿಟ್ಟು ಆತ ವಿವಸ್ತ್ರನಾಗಿರುವುದು ಕೊಲೆಯ ನಿಗೂಢ ತೆಯನ್ನು ಹೆಚ್ಚಿಸಿದೆ.

ಸುದ್ದಿ ತಿಳಿದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ, ಅಡಿಷನಲ್ ಎಸ್ಪಿ ತಿಮ್ಮಯ್ಯ, ಡಿವೈಎಸ್ಪಿ ಯಶವಂತ್ ಕುಮಾರ್, ಸಿಪಿಐ ಶ್ರೀಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನ ಪತ್ನಿ ಸುಶೀಲ ನೀಡಿದ ದೂರಿನ ಮೇರೆಗೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ. ಶವವನ್ನು ವೈದ್ಯಕೀಯ ಪರೀಕ್ಷೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ.

Tags:
error: Content is protected !!