Mysore
21
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಮೈಸೂರಿನಲ್ಲೇ ಗಾಂಜಾ ಕೇಸು ಜಾಸ್ತಿ ಯಾಕೆ.? ಹೈಕೋರ್ಟ್‌ ಕಳವಳ

ಬೆಂಗಳೂರು: ಲೋಕ್‌ ಅದಾಲತ್‌ನಲ್ಲಿ ಗಾಂಜಾ ಆರೋಪದ ಕೇಸುಗಳನ್ನು ಸೆಟಲ್‌ ಮಾಡಲಾಗುತ್ತದೆಯೇ ಎಂದು ಹೈಕೋರ್ಟ್‌ ತೀವ್ರ ಆಶ್ಚರ್ಯ ವ್ಯಕ್ತಪಡಿಸಿದೆ.

ಗಾಂಜಾ ಮಾರಾಟದ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ರದ್ದುಪಡಿಸುವಂತೆ ಕೋರಿ ನ್ಯಾಯಾಂಗ ಬಂಧನದಲ್ಲಿರು ಮೈಸೂರಿನ ಸಮೀರ್‌ ಖಾನ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಸೋಮವಾರ ವಿಚಾರಣೆ ನಡೆಸಿತು.

ವಕೀಲ ಆರ್.‌ ಮಹದೇವ ಅರ್ಜಿದಾರರನ್ನು ಮೈಸೂರಿನ ಬಿಇಒ ಕಚೇರಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದಡಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ದಾಖಲಾಗಿರುವ ಕಲಂಗಳು ಜಾಮೀನು ಪಡೆಯಲು ಅರ್ಹವಾಗಿವೆ. ಆದರೆ ವಿಚಾರಣಾ ಕೋರ್ಟ್‌ ಜಾಮೀನು ತಿರಸ್ಕರಿಸಿದೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

ಈ ಮಾತಿಗೆ ನ್ಯಾಯಮೂರ್ತಿಗಳು, ಏನ್ರೀ ಇದು ಲೋಕ್‌ ಅದಾಲತ್‌ನಲ್ಲಿ ಗಾಂಜಾ ಆರೋಪದ ಕೇಸುಗಳನ್ನೆಲ್ಲಾ ಸೆಟಲ್‌ ಮಾಡಲಾಗುತ್ತದೆಯೇ? ಹೀಗಾದರೆ ನಾಳೆ ಎಂಡಿಎಂಎ ಕೇಸುಗಳನ್ನೂ ರಾಜಿ ಸಂಧಾನದ ಮೂಲಕ ವಿಲೇವಾರಿ ಮಾಡಬಹುದಲ್ಲವೇ ಎಂದು ಕಳವಳ ವ್ಯಕ್ತಪಡಿಸಿದರು.

ಇದೇ ವೇಳೆ ಮೈಸೂರಿನಲ್ಲೇ ಗಾಂಜಾ ಕೇಸುಗಳು ಯಾಕೆ ಜಾಸ್ತಿ ಎಂದು ಅರ್ಜಿದಾರರ ಪರ ವಕೀಲರನ್ನು ಕೌತುಕದಿಂದ ಪ್ರಶ್ನಿಸಿದ ನ್ಯಾಯಮೂರ್ತಿಗಳು, ಮುಂದೆ ಏನಾದರೂ ಈ ಆರೋಪಿಯ ಕೈಯಿಂದ ವಾಣಿಜ್ಯ ಉದ್ದೇಶದ ಹೊರತಾದ ಮೂರು ಗ್ರಾಂ ಗಾಂಜಾ ಸಿಕ್ಕರೂ ಬಿಡುವುದಿಲ್ಲ. ಜೈಲಿಗೆ ಕಳುಹಿಸುತ್ತೇನೆ ಎಂದು ಎಚ್ಚರಿಸಿ ಮಧ್ಯಂತರ ಮನವಿಯ ಅನುಸಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದರು.

 

Tags:
error: Content is protected !!