Mysore
21
broken clouds

Social Media

ಶನಿವಾರ, 21 ಫೆಬ್ರವರಿ 2026
Light
Dark

ಚಿರತೆ ಮರಿ ಸೆರೆ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಗ್ರಾಮಸ್ಥರು

ಹನೂರು: ತಾಲ್ಲೂಕಿನ ಲೊಕ್ಕನಹಳ್ಳಿ ಸಮೀಪದ ಸೀರಗೊಡು ಗ್ರಾಮದ ಸೂಳಿಮೇಡು ಅರಣ್ಯ ಪ್ರದೇಶದಲ್ಲಿ ಸುಮಾರು ಆರು ತಿಂಗಳ ಚಿರತೆ ಮರಿಯನ್ನು ಗ್ರಾಮಸ್ಥರು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

ಸೀರಗೊಡು ಗ್ರಾಮದ ರೈತ ವೆಂಕಟರಮಣ ಶೆಟ್ಟಿ ತನಗೆ ಸೇರಿದ ಆಡು ಮರಿಗಳನ್ನು ಮೇವು ಮೇಯಲು ಬಿಟ್ಟಿದ್ದ ಆದರೆ ಸಾಕಷ್ಟು ಸಮಯವಾದರೂ ಒಂದು ಆಡುಮರಿ ಬಾರದ ಹಿನ್ನಲೆ ಹುಡುಕಲು ತೆರಳಿದ್ದ ವೇಳೆ ಕಾಡು ಪ್ರಾಣಿಯಿಂದ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಆಡು ಮರಿ ಮೃತಪಟ್ಟಿದ್ದ ಸಮೀಪದ ಮರದ ಮೇಲೆ ಚಿರತೆ ಮರಿ ಇರುವುದನ್ನು ಗಮನಿಸಿದ್ದಾರೆ.

ಮರದ ಮೇಲೆ ಚಿರತೆ ಮರಿ ಕಂಡುಬಂದ ಹಿನ್ನೆಲೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವವರೆಗೆ ಗ್ರಾಮಸ್ಥರು ಎಚ್ಚರಿಕೆಯಿಂದ ಮುನ್ನೆಚ್ಚರಿಕೆ ಕ್ರಮವಹಿಸಿ
ಸುಮಾರು ಎರಡು ಗಂಟೆಗಳ ಬಳಿಕ ಚಿರತೆ ಮರಿ ಮರದಿಂದ ಕೆಳಗೆ ಇಳಿದ ನಂತರ ಗ್ರಾಮಸ್ಥರು ಹರಸಾಹಸಪಟ್ಟು ಅದನ್ನು ಯಾವುದೇ ಅಪಾಯವಾಗದಂತೆ ಸೆರೆ ಹಿಡಿದು ಅರಣ್ಯ ಇಲಾಖೆಯ ಅಧಿಕಾರಿಗಳ ವಶಕ್ಕೆ ಒಪ್ಪಿಸಿದ್ದಾರೆ.

ಚಿರತೆ ಮರಿ ಸೆರೆ ಹಿಡಿಯುವಾಗ ಕೆಲವು ಯುವಕರಿಗೆ ಚಿರತೆ ಮರಿ ಪರಚಿದ ಹಿನ್ನೆಲೆ ಸಣ್ಣಪುಟ್ಟ ಗಾಯಗಳಾಗಿ ರಕ್ತಸ್ರಾವಾಗಿದೆ.

ಸಿರಗೋಡು ಗ್ರಾಮದ ವೆಂಕಟರಮಣ ಶೆಟ್ಟಿ ಎಂಬುವರ ಪಟ್ಟ ಜಮೀನಿನಲ್ಲಿ ಆಡುಮರಿಯ ಮೇಲೆ ಚಿರತೆ ದಾಳಿ ನಡೆಸಿ ಸಮೀಪದ ಮರದ ಮೇಲೆ ಇರುವುದನ್ನು ಗ್ರಾಮಸ್ಥರು ಮಾಹಿತಿ ನೀಡಿದ ತಕ್ಷಣ ಸ್ಥಳೀಯರ ಸಹಕಾರದಿಂದ ಚಿರತೆ ಸೆರೆಹಿಡಿಯಲಾಗಿದೆ. ತಾಯಿ ಚಿರತೆಯು ಸಂಜೆ ಆರರ ವೇಳೆ ಅರಣ್ಯ ಪ್ರದೇಶಕ್ಕೆ ಹೋಗಿರುವ ಬಗ್ಗೆ ಗ್ರಾಮಸ್ಥರೇ ಮಾಹಿತಿ ನೀಡಿದ್ದಾರೆ ಆದರೂ ಮುನ್ನೆಚ್ಚರಿಕೆ ಕ್ರಮ ವಹಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

 

ವರದಿ : ಮಹದೇಶ್ ಎಂ.ಗೌಡ

Tags:
error: Content is protected !!