Mysore
21
overcast clouds

Social Media

ಶನಿವಾರ, 04 ಜುಲೈ 2026
Light
Dark

ಗುಂಡ್ಲುಪೇಟೆ | ಮಳೆಗೆ ಕೆರೆಯಂತಾದ ಶಾಲೆ, ಗ್ರಾಪಂ ಕೂಸಿನಮನೆ ಆವರಣ

ಗುಂಡ್ಲುಪೇಟೆ : ತಾಲ್ಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿರುವ ಉನ್ನತೀಕರಿಸಿದ ಸರ್ಕಾರಿ ಶಾಲೆಯ ಆವರಣದಲ್ಲಿ ಮಳೆ ನೀರು ಆವರಿಸಿಕೊಂಡು ಕೆರೆಯಂತಾಗಿದ್ದು, ಶಾಲೆಗೆ ಹೊಂದಿಕೊಂಡಂತೆ ಕೂಸಿನ ಮನೆ ಆವರಣದಲ್ಲೂ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿ ಶಾಲಾ ಮಕ್ಕಳಿಗೆ ಸಮಸ್ಯೆಯಾಗಿದೆ.

ಶಾಲೆಯ ಕಾಂಪೌಂಡ್ ಒಳಗೆ ಗ್ರಾಮ ಪಂಚಾಯಿತಿ ಕಾರ್ಯಾಲಯವೂ ಇದ್ದು ಮಳೆ ನೀರು ನಿಂತು ಶಾಲಾ ಮಕ್ಕಳಿಗೆ ಮತ್ತು ಗ್ರಾಪಂಗೆ ತೊಂದರೆಯಾಗುತ್ತಿದೆ ಎಂಬ ಅರಿವಿದ್ದರೂ ಪಿಡಿಒ ಮಣ್ಣು ಹಾಕಿ ನೀರು ನಿಲ್ಲದಂತೆ ಮಾಡದಿರುವುದು ವಿಪರ್ಯಾಸ.

ನಿತ್ಯ ಮಳೆಯಾದರೆ ಕೆರೆಯಂತೆ ತುಂಬಿರುವ ನೀರಿನಲ್ಲಿ ಮಕ್ಕಳು ಹೋಗಲು ಸಾಧ್ಯವೇ? ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಗಮನವಹಿಸಿ ಮಳೆ ನೀರು ನಿಲ್ಲದಂತೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Tags:
error: Content is protected !!