Mysore
23
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ರೈತರ ಹಣದಲ್ಲಿ ಅವ್ಯವಹಾರ : ಆರೋಪ

ಪಿರಿಯಾಪಟ್ಟಣ: ತಂಬಾಕು ಮಂಡಳಿಯ ಹರಾಜು ಮಾರುಕಟ್ಟೆ ಸಂಖ್ಯೆ 5 ರಲ್ಲಿ ರೈತರಿಂದ ಸಂಗ್ರಹಣೆ ಮಾಡಿದ್ದ 6 ಕೋಟಿಗಳಿಗೂ ಹೆಚ್ಚು ಹಣವನ್ನು ಬ್ಯಾಂಕಿಗೆ ಪಾವತಿಸದೆ ವಿವಿಧ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಕೊಂಡು ಅವ್ಯವಹಾರ ನಡೆಸಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ತಂಬಾಕು ಬೆಳೆಗಾರ ಗೊರಳ್ಳಿ ಅಶ್ವತ್ ಆರೋಪಿಸಿದರು.

ಈ ಕುರಿತು ಗುರುವಾರ ಪಟ್ಟಣದ ಕಾರ್ಯನಿರತ ಪತ್ರಕರ್ತ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, ರೈತರಿಗೆ ತಂಬಾಕು ಮಂಡಳಿ ಮುಂಗಡವಾಗಿ 49 ಸಾವಿರ ರೂ. ಮೌಲ್ಯದ ರಸಗೊಬ್ಬರ ವಿತರಿಸುತ್ತಿದ್ದು, ಈ ಹಣವನ್ನು ರೈತರು ತಂಬಾಕು ಮಾರುಕಟ್ಟೆಗೆ ತಂಬಾಕು ಮಾರಾಟ ಮಾಡಿದ ನಂತರ ರೈತರಿಂದ ಪಡೆದುಕೊಂಡು ಬ್ಯಾಂಕಿಗೆ ಪಾವತಿಸಬೇಕಾಗಿತ್ತು. ಆದರೆ ಬ್ಯಾಂಕಿಗೆ ಪಾವತಿಸದೆ ತಮ್ಮ ಇಷ್ಟ ಬಂದ ಜನರ ಖಾತೆಗಳಿಗೆ ವರ್ಗಾಯಿಸಿಕೊಂಡು ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

ಅಧಿಕಾರಿಗಳ ಪ್ರೋತ್ಸಾಹ ಇಲ್ಲದೆ ಹಗರಣ ಮಾಡಲು ಸಾಧ್ಯವಿಲ್ಲ, ತಂಬಾಕು ಮಂಡಳಿಯಲ್ಲಿ ಪ್ರತಿ ವರ್ಷ ಲೆಕ್ಕ ಪರಿಶೋಧನೆ ಮಾಡಿಸುವ ಪದ್ಧತಿ ಇದ್ದು, ಹಗರಣ ಆಗಿರುವಂತಹ ವರ್ಷಗಳಲ್ಲಿ ಯಾವ ಕಾರಣಕ್ಕೆ ಆಡಿಟ್ ಆಗಿಲ್ಲ? ಆಗಿದ್ದರೆ ಏಕೆ ಅಧಿಕಾರಿಗಳು ಈ ವಿಷಯವನ್ನು ಬಹಿರಂಗ ಪಡಿಸಿಲ್ಲ ಎಂದು ಪ್ರಶ್ನಿಸಿದರು.

ಕೋಟಿ ಕೋಟಿ ಹಣ ರೈತರಿಗೆ ವಂಚಿಸಿದ್ದರೂ ಪೊಲೀಸ್ ಠಾಣೆಗೆ ದೂರು ನೀಡಿ ಕ್ರಿಮಿನಲ್ ಪ್ರಕರಣವನ್ನು ಏಕೆ ದಾಖಲಿಸಿಲ್ಲ, ಆದ್ದರಿಂದ ರೈತರ ಹಣ ವಂಚನೆಯ ಸಮಯದಲ್ಲಿದ್ದ ಅಧಿಕಾರಿಗಳ ವಿರುದ್ಧ ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.

 

Tags:
error: Content is protected !!