Mysore
26
haze

Social Media

ಮಂಗಳವಾರ, 31 ಮಾರ್ಚ್ 2026
Light
Dark

ಕ್ಷೇತ್ರದಲ್ಲಿ ಮಳೆ ಅನಾಹುತ ತಡೆಗಟ್ಟಲು ಎಲ್ಲಾ ರೀತಿಯ ಕ್ರಮ: ಶಾಸಕ ಕೆ.ಹರೀಶ್‌ ಗೌಡ

hareesh gowda

ಮೈಸೂರು: ಚಾಮರಾಜ ಕ್ಷೇತ್ರದಲ್ಲಿ ಮಳೆ ಅನಾಹುತ ತಡೆಗಟ್ಟಲು ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಕೆ.ಹರೀಶ್‌ ಗೌಡ ಹೇಳಿದ್ದಾರೆ.

ಈ ಕುರಿತು ಮೈಸೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ತಗ್ಗು ಪ್ರದೇಶಗಳಲ್ಲಿ ನೀರು ಮನೆಗಳಿಗೆ ನುಗ್ಗುವುದನ್ನ ತಡೆಗಟ್ಟುವ ಕಾಮಗಾರಿಯನ್ನೂ ಮುಗಿಸಿದ್ದೇವೆ. ಯುಜಿಡಿ ನೀರು ಬ್ಲಾಕ್ ಆಗದಂತೆ ಜಟ್ಟಿಂಗ್ ಮಿಷನ್‌ಗಳನ್ನ ಕೂಡ ಸಜ್ಜಾಗಿಟ್ಟುಕೊಂಡಿದ್ದೇವೆ.

ಕಾರ್ಪೋರೇಷನ್ ಸಹಕಾರದೊಂದಿಗೆ ಎಲ್ಲೂ ಯಾವ ಸಮಸ್ಯೆ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಅಧಿಕಾರಿಗಳ ಸಭೆ ನಡೆಸಿ ಹಲವು ಸಲಹೆ, ಸೂಚನೆ ಕೊಟ್ಟಿದ್ದೇನೆ. ರಸ್ತೆ ಬದಿ ಇರುವ ಹಳೆ ಮರಗಳ ರೆಂಬೆ, ಕೊಂಬೆಗಳ ತೆರವು ಮಾಡುವುದಕ್ಕೂ ಸೂಚನೆ ನೀಡಿದ್ದೇವೆ. ಮೇಟಗಳ್ಳಿ, ಕುಂಬಾರ ಕೊಪ್ಪಲು, ಬಿಎಂಶ್ರೀ ನಗರದ ಕೆಲವು ಕಡೆ ತಗ್ಗು ಪ್ರದೇಶಗಳಲ್ಲಿ ಸ್ವಲ್ಪ ಸಮಸ್ಯೆ ಉಂಟಾಗುತ್ತದೆ. ಈಗಾಗಲೇ ಅಲ್ಲೆಲ್ಲಾ ಸಮಸ್ಯೆಗಳನ್ನು ಸರಿಪಡಿಸಲಾಗಿದೆ. ಈಗ ಬೀಳುವ ಮಳೆಗೆ ಮುಂಜಾಗ್ರತಾ ಕ್ರಮವನ್ನು ಸಮಾರೋಪಾದಿಯಲ್ಲಿ ತೆಗೆದುಕೊಳ್ಳಲು ಎಲ್ಲರೂ ಸಜ್ಜಾಗಿದ್ದಾರೆ ಎಂದರು.

Tags:
error: Content is protected !!