Mysore
22
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಉಗ್ರರ ದಾಳಿ ಬೆನ್ನಲ್ಲೇ ರಾಷ್ಟೀಯ ಭದ್ರತಾ ಸಲಹಾ ಮಂಡಲಿ ಪುನಾರಚನೆ ; ಅಧ್ಯಕ್ಷರಾಗಿ ಅಲೋಕ್‌ ಜೋಶಿ ನೇಮಕ

national security advisory

ಹೊಸದಿಲ್ಲಿ: ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ (ಎನ್‌ಎಸ್‌ಎಬಿ)ಯ ಅಧ್ಯಕ್ಷರಾಗಿ ಅಲೋಕ್‌ ಜೋಶಿ ಅವರನ್ನು ನೇಮಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಭಾರತದ ಬಾಹ್ಯ ಗುಪ್ತಚರ ಸಂಸ್ಥೆ, ರಿಸರ್ಚ್‌ ಅಂಡ್‌ ಅನಾಲಿಸಿಸ್‌ ವಿಂಗ್‌(R&AW)ನ ಮಾಜಿ ಮುಖ್ಯಸ್ಥರಾದ ಜೋಶಿ ಅವರು ಇದೀಗ ಎನ್‌ಎಸ್‌ಎಬಿ ಯ ಸಾರಥ್ಯ ವಹಿಸಿದ್ದಾರೆ. ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರದ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳಲು ತಯಾರಿ ನಡೆಸುತ್ತಿದೆ ಎನ್ನುವ ನಡುವೆ, ಅದರ ಗಡಿಯಾಚೆಗಿನ ಸಂಪರ್ಕಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಬದಲಾವಣೆ ಮಾಡಿದೆ.

ಮಾಜಿ ವಾಯುಸೇನೆ ಕಮಾಂಡರ್‌ ಏರ್‌ ಮಾರ್ಷಲ್‌ ಪಿ.ಎಂ ಸಿನ್ಹಾ, ಲೆ.ಜನರಲ್‌ ಎ.ಕೆ ಸಿಂಗ್‌ ಮತ್ತು ನಿವೃತ್ತ ಅಡ್ಮಿರಲ್‌ ಮೊಂಟಿ ಖನ್ನ ಅವರನ್ನು ಮಂಡಳಿಯ ಸದಸ್ಯರಾಗಿ ನೇಮಿಸಿದೆ.

ಇವರಲ್ಲದೆ, ಮಾಜಿ ರಾಜತಾಂತ್ರಿಕ ಅಧಿಕಾರಿ ಬಿ.ವೆಂಕಟೇಶ್‌ ವರ್ಮಾ, ನಿವೃತ್ತ ಐಪಿಎಸ್‌ ರಾಜೀವ್‌ ರಂಜನ್‌ ವರ್ಮಾ ಅವರನ್ನೂ ಮಂಡಳಿಯ ಸದಸ್ಯರಾಗಿ ನೇಮಿಸಲಾಗಿದೆ.

Tags:
error: Content is protected !!