Mysore
28
scattered clouds

Social Media

ಬುಧವಾರ, 12 ಆಗಸ್ಟ್ 2026
Light
Dark

ಹಾಸನಗೆ ತಟ್ಟದ ಬಂದ್‌ ಬಿಸಿ

ಹಾಸನ: ಕನ್ನಡಿಗರ ಮೇಲೆ ಬೆಳಗಾವಿಯ ಎಂಇಎಸ್  ಪುಂಡರು ಹಲ್ಲೆ ಮಾಡುವುದನ್ನು ಖಂಡಿಸಿ ವಾಟಾಳ್ ನಾಗರಾಜ್, ಸಾ.ರಾ.ಗೋವಿಂದು ಮತ್ತು ಕನ್ನಡಪರ ಸಂಘಟನೆಗಳು ಕರೆ ನೀಡಿದಂತೆ ಶನಿವಾರದಂದು ಹಾಸನದಲ್ಲಿ ಬಂದ್ ಗೆ ಬೆಂಬಲ ಸಿಗದೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಜಿಲ್ಲಾ ಡಾ. ರಾಜಕುಮಾರ್ ಅಭಿಮಾನಿಗಳ ಸಂಘದಿಂದ ಬೆಂಬಲಿಸಿ ಜಿಲ್ಲಾಡಳಿತಕ್ಕೆ ಮನವಿ ಕೊಟ್ಟಿರುವುದು ಬಿಟ್ಟರೆ ಯಾವುದೇ ಅಂಗಡಿ ಮುಗ್ಗಟ್ಟನ್ನು ಯಾರು ಮುಚ್ಚಲಲ್ಲ. ಎಂದಿನಂತೆ ವಾಹನಗಳು ಸಂಚರಿಸಿದವು. ಭಾಷೆಯ ಬಗ್ಗೆ ನಡೆದ ವಾಗ್ವಾದದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್ ಚಾಲಕ ಮತ್ತು ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ಘಟನೆಯ ನಂತರ ಮಾರ್ಚ್ ೨೨ ರಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿತ್ತು.

ಮಹಾರಾಷ್ಟ್ರದ ಗಡಿಯಲ್ಲಿರುವ ಜಿಲ್ಲೆಯಾದ ಬೆಳಗಾವಿಯ ಹೊರವಲಯದಲ್ಲಿ ಈ ವಾಗ್ವಾದ ನಡೆದಿರುವುದನ್ನು ಖಂಡಿಸಲಾಗಿತ್ತು. ಅಂದು ವಾಟಳ್ ನಾಗರಾಜು ಕರ್ನಾಟಕ ಬಂದ್ ಗೆ ಕರೆ ಕೊಡಲಾಗಿತ್ತು. ತದನಂತರ ಈ ಬಗ್ಗೆ ಅಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಬಂದ್ ಯಶಸ್ವಿಯಾಗಿರುವುದಿಲ್ಲ. ಕೆ.ಎಸ್.ಆರ್.ಟಿ.ಸಿ. ಬಸ್, ಖಾಸಗಿ ಬಸ್, ಆಟೋ, ಕಾರು ಸೇರಿದಂತೆ ಎಲ್ಲಾ ವಾಹನಗಳು ಎಂದಿನಂತೆ ಸಂಚರಿಸಿದವು. ಇನ್ನು ಅಂಗಡಿ ಮುಗ್ಗಟ್ಟು ಕೂಡ ತೆರೆದಿತ್ತು. ಯಾವ ಕಛೇರಿಗಳು ಬಾಗಿಲು ಹಾಕಲಿಲ್ಲ. ಆದರೇ ಮುನ್ನೇಚ್ಚರಿಕೆ ಕ್ರಮವಾಗಿ ಪೊಲೀಸ್‌ ಬಂದು ಬಸ್ತ್ ಮಾಡಲಾಗಿತ್ತು.

Tags:
error: Content is protected !!