Mysore
22
overcast clouds

Social Media

ಭಾನುವಾರ, 23 ಆಗಸ್ಟ್ 2026
Light
Dark

ಹನೂರು| ಜಾತಿ ನಿಂದನೆ ಆರೋಪ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಹನೂರು: ತಾಲ್ಲೂಕಿನ ಬೂದುಬಾಳು ಗ್ರಾಮದಲ್ಲಿ ನಡೆದ ಪಲ್ಲಕ್ಕಿ ಉತ್ಸವದ ವೇಳೆ ಕುಣಿಯುವಾಗ ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಜಾತಿ ಹೆಸರೇಳಿ ನಿಂದನೆ ಮಾಡಿದ್ದ ನಾಲ್ವರ ಮೇಲೆ ಹನೂರು ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ.

ಹನೂರು ತಾಲ್ಲೂಕಿನ ಬೂದಬಾಳು ಗ್ರಾಮದ ಆಕಾಶ್, ಮನೋಜ್, ಶ್ರೀನಿವಾಸ್, ಕಾರ್ತಿಕ್ ಎಂಬುವವರ ಮೇಲೆ ಪ್ರಕರಣ ದಾಖಲಾಗಿದೆ.

ಘಟನೆ ವಿವರ: ಬೂದುಬಾಳು ಗ್ರಾಮದಲ್ಲಿ ನಡೆದ ಜಾತ್ರಾ ಮಹೋತ್ಸವ ಸಂಬಂಧ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಬೂದುಬಾಳು ಗ್ರಾಮದ ದೊಡ್ಡಕೆರೆಯವರೆಗೆ ಪಲ್ಲಕ್ಕಿ ಉತ್ಸವ ತರುವ ವೇಳೆ ಸಾಂಪ್ರದಾಯದಂತೆ ನಾನು ನನ್ನ ಅಣ್ಣ ಹಾಗೂ ಸ್ನೇಹಿತರು ಕುಣಿದುಕೊಂಡು ಬರುತ್ತಿದ್ದಾಗ ನಮ್ಮಗಳ ಮೇಲೆ ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಚಂದು ಎಂಬುವವರು ಹನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಬ್ ಇನ್ಸ್‌ಸ್ಪೆಕ್ಟರ್ ಮಂಜುನಾಥ್ ಪ್ರಸಾದ್ ಅವರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

Tags:
error: Content is protected !!