Mysore
27
overcast clouds

Social Media

ಸೋಮವಾರ, 09 ಫೆಬ್ರವರಿ 2026
Light
Dark

ಮಹಾಕುಂಭಮೇಳದ ನೀರಿಗೆ ಜಾತಿ, ಧರ್ಮ, ಪಾರ್ಟಿ ಇದೆಯಾ?: ಡಿಸಿಎಂ ಡಿ.ಕೆ.ಶಿವಕುಮಾರ್‌

ಉಡುಪಿ: ನಾನು ಮಹಾಕುಂಭಮೇಳದಲ್ಲಿ ಭಾಗಯಾದರೆ ತಪ್ಪೇನಿದೆ, ಆ ನೀರಿಗೆ ಜಾತಿ, ಧರ್ಮ ಹಾಗೂ ಪಾರ್ಟಿ ಇದೆಯಾ ಎಂದು ಸ್ವಪಕ್ಷದ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಉಡುಪಿಯಲ್ಲಿ ಇಂದು(ಮಾರ್ಚ್‌.2) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಪ್ರಯಾಗ್‌ ರಾಜ್‌ನ ಮಹಾ ಕುಂಭಮೇಳಕ್ಕೆ ಹೋಗಿದ್ದೆ, ಅಂತೆಯೇ ಟಿ.ನರಸೀಪುರದಲ್ಲಿ ನಡೆದ ಕುಂಭಮೇಳದಲ್ಲೂ ಭಾಗಿಯಾಗಿದ್ದೇನೆ ಅದರಲ್ಲಿ ತಪ್ಪೇನಿದೆ? ಯಾರು ಯಾವ್ಯಾವ ಲೆಕ್ಕಚಾರವನ್ನು ಬೇಕಾದರೂ ಹಾಕಿಕೊಳ್ಳಲಿ. ಅದರ ಅವಶ್ಯಕತೆ ಆಗಲಿ ಅಥವಾ ಲೆಕ್ಕಚಾರದ ಅವಶ್ಯಕತೆ ಆಗಲಿ ನನಗೆ ಬೇಕಾಗಿಲ್ಲ ಎಂದು ತಮ್ಮ ವಿರೋಧಿಗಳಿಗೆ ಟಾಂಗ್‌ ನೀಡಿದರು.

ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರ ಹೇಳಿಕೆಗಳ ಬಗ್ಗೆ ಮಾತನಾಡಿದ ಅವರು, ನಾನು ಯಾವ ದೇವಾಲಯಕ್ಕೆ ಹೋದರೂ, ಯಾವ ಧಾರ್ಮಿಕ ವಿಚಾರ ಮಾತನಾಡಿದರೂ ಸಂಚಲನವಾಗುತ್ತದೆ. ನಿಮ್ಮ ಜಿಲ್ಲೆಯವರೇ ನನ್ನನ್ನು ಯೇಸು ಕುಮಾರ ಎಂದಿದ್ದರು. ಯೇಸುವಿನ ಶಿಲಾಮೂರ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಎಂಬ ಕಾರಣಕ್ಕೆ ಹೀಗೆ ಹೇಳಿದ್ದರು. ಯಾರೋ ಒಬ್ಬ ಎಂಪಿ ಅವರು ಮುಸಲ್ಮಾನರ ಎದೆ ಸೀಳಿದರೆ ಮೂರು ಅಕ್ಷರ ಇಲ್ಲ ಅಂದಿದ್ದರು. ಅಲ್ಲದೇ ಅವರು ಕೇವಲ ಪಂಚರ್ ಹಾಕೋಕೆ ಲಾಯಕ್ಕು ಎಂದಿದ್ದ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಿ, ಅವರೆಲ್ಲ ನಮ್ಮ ಬ್ರದರ್ಸ್‌, ಅವರಿಲ್ಲದೆ ಬದುಕೋಕೆ ಆಗಲ್ಲ ಎಂದಿದ್ದೆ ಎಂದು ಹೇಳಿದರು.

ಇನ್ಮು ನಾವು ಚಿಕನ್ನು ಮತ್ತು ಮಟನ್ನು ಕಡಿಯೋಕೆ ಆಗುತ್ತಾ? ಮುಸಲ್ಮಾನರೇ ಕಡಿಯುವುದು. ಯಾರು ಯಾವ ಕೆಲಸ ನಿರ್ವಹಿಸಬೇಕೋ ಅವರು ಅದನ್ನೇ ಮಾಡಬೇಕು, ಅದನ್ನೇ ಮಾಡುತ್ತಾರೆ. ಅವರನ್ನು ಬ್ರದರ್ಸ್ ಅಂದಿದ್ದಕ್ಕೆ ನನ್ನನ್ನು ಇನ್ನೊಂದು ಹೆಸರಲ್ಲಿ ಕರೆದರು ಎಂದು ವಾಗ್ದಾಳಿ ನಡೆಸಿದರು.

Tags:
error: Content is protected !!