Mysore
22
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಎಸ್.ಎಂ.ಕೃಷ್ಣರನ್ನು ನೆನೆದು ಭಾವುಕ ಪೋಸ್ಟ್‌ ಮಾಡಿದ ರಾಧಿಕಾ ಪಂಡಿತ್‌

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ ಎಸ್.ಎಂ.ಕೃಷ್ಣ ಎಂದು ನಟಿ ರಾಧಿಕಾ ಪಂಡಿತ್‌ ಭಾವುಕ ಪೋಸ್ಟ್‌ ಮಾಡಿದ್ದಾರೆ.

ಈ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಭಾವುಕ ಪೋಸ್ಟ್‌ ಮಾಡಿರುವ ಅವರು, ಬೆಂಗಳೂರಿಗೆ ವಿಶ್ವ ಮಾನ್ಯತೆ ದೊರಕಿಸಿದ ಶಿಸ್ತುಬದ್ಧ ರಾಜಕಾರಣಿ. ಹಸನ್ಮುಖಿ, ಕಲಾಪ್ರೇಮಿಯಾಗಿ ಸದಾ ಕಾಲ ನಮ್ಮ ಕುಟುಂಬವನ್ನು ಪ್ರೋತ್ಸಾಹಿಸಿದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಓಂ ಶಾಂತಿ ಎಂದು ರಾಧಿಕಾ ಪಂಡಿತ್‌ ಬರೆದುಕೊಂಡಿದ್ದಾರೆ.

ಕಳೆದ 2016ರಲ್ಲಿ ಯಶ್‌ ಹಾಗೂ ರಾಧಿಕಾ ಮದುವೆಗೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಬಂದು ಹಾರೈಸಿದ ಫೋಟೋ ಶೇರ್‌ ಮಾಡಿ ನಟಿ ಕಂಬನಿ ಮಿಡಿದಿದ್ದಾರೆ.

 

Tags:
error: Content is protected !!