Mysore
30
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ದರ್ಶನ್‌ ಕೇಸ್: ವಾದ-ವಿವಾದ ಅಂತ್ಯ; ಅ.14ಕ್ಕೆ ಆದೇಶ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪಿ ದರ್ಶನ್‌ ಜಾಮೀನು ಅರ್ಜಿ ಕುರಿತ ವಿಚಾರಣೆಯು ಕಳೆದ ಕೆಲವು ದಿನಗಳಿಂದ 57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ನಡೆದಿದೆ.

ಎಸ್‌ಪಿಪಿ ಪ್ರಸನ್ನ ಕುಮಾರ್‌ ಹಾಗೂ ದರ್ಶನ್‌ ಪರ ವಕೀಲ ಸಿವಿ ನಾಗೇಶ್‌ ಅವರುಗಳು ಸುದೀರ್ಘವಾದ ಸರಣಿ ವಾದಗಳನ್ನ ಮಾಡಿದ್ದಾರೆ. ಇಂದು ಸಹ ವಾದ ನಡೆದಿದ್ದು, ಇಲ್ಲಿಗೆ ವಕೀಲರು ವಾದವನ್ನು ಅಂತ್ಯಗೊಳಿಸಿದ್ದಾರೆ.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯ ಆದೇಶವನ್ನು ಅ.14ಕ್ಕೆ ಕಾಯ್ದಿರಿಸಿದ್ದಾರೆ. ಆ ದಿನ ಅಂದರೆ ಅ.14 ರಂದು ದರ್ಶನ್‌ ಜಾಮೀನು ಭವಿಷ್ಯ ನಿರ್ಧರವಾಗಲಿದೆ.

Tags:
error: Content is protected !!