Mysore
23
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ನಂಜನಗೂಡಿನ ಸುತ್ತೂರು ಸೇತುವೆ ಸಂಪೂರ್ಣ ಜಲಾವೃತ

ಮೈಸೂರು : ಕಬಿನಿ ಜಲಾಶಯದಿಂದ ಹೆಚ್ಚು ನೀರು ಬಿಡುಗಡೆ ಮಾಡಿರುವ ಕಾರಣ ಕಪಿಲಾ ನದಿ ಉಕ್ಕಿಹರಿಯುತ್ತಿದ್ದು, ಸುತ್ತೂರು ಸೇತುವೆ ಕಪಿಲಾ ನದಿ ನೀರಿನಲ್ಲಿ ಮುಳುಗಿ ಹೋಗಿದೆ. ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸುತ್ತೂರು ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಮೈಸೂರು ಸುತ್ತೂರು ಸಂಪರ್ಕ ಕಲ್ಪಿಸುವ ಮಾರ್ಗ ಬದಲಾವಣೆ ಮಾಡಲಾಗಿದೆ.ಸುತ್ತೂರು ಕ್ಷೇತ್ರದ ಗದ್ದಿಗೆ ಆವರಣ ಹಾಗೂ ಸುತ್ತೂರು ಗೆಸ್ಟ್‌ ಹೌಸ್‌ ಕಟ್ಟಡಗಳಿಗೂ ನದಿ ನೀರು ನುಗ್ಗಿದೆ. ಅಲ್ಲದೆ ನೂರಾರು ಎಕರೆ ಗದ್ದೆಗಳಿಗೆ ಕಪಿಲಾ ನದಿ ನೀರು ನುಗ್ಗಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Tags:
error: Content is protected !!