ನವದೆಹಲಿ: 2019ರಲ್ಲಿ ರಾಹುಲ್ ಗಾಂಧಿ ಅವರನ್ನು ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಲ್ಲಿ ಸೋಲಿಸಿ ಸಂಚಲನ ಮೂಡಿಸಿದ್ದ ಸ್ಮೃತಿ ಇರಾನಿ ಬದಲಾದ ರಾಜಕೀಯ ಘಟ್ಟದಲ್ಲಿ ರಾಹುಲ್ ಕುಟುಂಬದ ಆಪ್ತ ಕಿಶೋರ್ ಲಾಲ್ ಶರ್ಮಾ ಅವರಿಂದ ಸೋಲನ್ನು ಅನುಭವಿಸಿದ್ದಾರೆ.
ಸೊಲುಂಡ ಇರಾನಿ ಅವರ ವಿರುದ್ಧ ನಿಂದನೆ ಹಾಗೂ ಅವರು ತಮ್ಮ ದೆಹಲಿಯ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರು ಇರಾನಿಯನ್ನು ಟ್ರೋಲ್ ಮಾಡಿ ಅಪಹಸ್ಯ ಮಾಡುತ್ತಿದ್ದಾರೆ. ಈ ಹಿನ್ನಲೆ ತಕ್ಷಣ ತಮ್ಮ ರಾಜಕೀಯ ವಿರೋಧಿ ಇರಾನಿ ಬೆಂಬಲಕ್ಕೆ ನಿಂತ ರಾಹುಲ್ ಯಾವುದೇ ವ್ಯಕ್ತಿಯನ್ನು ಸೋತ ಕೂಡಲೇ ನಿಂದಿಸಬಾರದು. ನಿಂದನೆ ಶಕ್ತಿ ಇಲ್ಲ, ಅದು ದೌರ್ಬಲ್ಯ ಎಂದು ಹೇಳುವ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ.
ರಾಜಕೀಯ ಜೀವನದಲ್ಲಿ ಸೋಲು ಮತ್ತು ಗೆಲುವುಗಳ ಸಂಭವಿಸುತ್ತವೆ. ಈ ಬಗ್ಗೆ ಅವಹೇಳನೆ ಹಾಗೂ ನಿಂದನೆ ಸರಿಯಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ ರಾಜಕೀಯ ಎದುರಾಳಿ ಸ್ಮೃತಿ ಇರಾನಿ ಬೆಂಬಲಕ್ಕೆ ಬರುವ ಮೂಲಕ ಜನರ ಮನ ಸೆಳೆದಿದ್ದಾರೆ.