Mysore
23
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ವಿಶ್ವನಾಥ್ ಗೆ ತಲೆಕೆಟ್ಟಿದೆ ಅನ್ಸುತ್ತೆ, ಆರೋಪಗಳಿಗೆ ದಾಖಲೆಗಳಿಟ್ಟು ಮಾತನಾಡಿ: ಎಂ.ಲಕ್ಷ್ಮಣ್‌

ಮೈಸೂರು : ವಿಶ್ವನಾಥ್‌ ಗೆ ತಲೆಕೆಟ್ಟಿದೆ  ಅನ್ಸುತ್ತೆ ಹುಚ್ಚು  ಹುಚ್ಚು ರೀತಿ ಮಾತನಾಡುವುದನ್ನ ನಿಲ್ಲಿಸಿ ನೀವು ಮಾಡುವ ಆರೋಪಗಳಿಗೆ ದಾಖಲೆಗಳಿದ್ರೆ ಅದನ್ನ ಇಟ್ಟು ಮಾತನಾಡಿ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್‌ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಕ್ರಮ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಕ್ರಮ ವಿಚಾರದಲ್ಲೆ ಸಿದ್ದರಾಮಯ್ಯ ಅವರ ಪತ್ನಿ ಹೆಸರು ಬರುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್‌ ದಾಖಲೆಗಳು ಇಲ್ಲದೆ ಹಿಟ್‌ ಅಂಡ್‌ ರನ್‌ ಕೇಸ್‌ ಮಾಡುವುದು ಸರಿಯಲ್ಲ.ಮಾತನಾಡುವ ಹಕ್ಕಿದೆ, ಆದರೆ ಸುಳ್ಳು ಆರೋಪ ಮಾಡುವುದಕ್ಕೆ ಹಕ್ಕಿಲ್ಲ. ಬಿಜೆಪಿ ಎಂಎಲ್ಸಿ‌ ವಿಶ್ವನಾಥ್ ಸಿದ್ದರಾಮಯ್ಯ ಹೆಂಡತಿ ಪಾರ್ವತಿ ಮೇಲೆ ಆಪಾದನೆ ಮಾಡಿದ್ದಾರೆ. ದಾಖಲೆಗಳನ್ನ ನಾವು ನಿಮಗೆ ಕಳಿಸಿಕೊಡುತ್ತೇವೆ ಅದನ್ನ ನೋಡಿ ಮಾಡನಾಡಿ. ಸುಖಸುಮ್ಮನೆ ಆರೋಪ ಮಾಡೋದು ಸರಿಯಲ್ಲ.  ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿರುವ ಅಕ್ರಮ ಇದು, ಇವರ ಮೇಲೆ ಶಿಸ್ತು ಕ್ರಮ ಜರುಗಿಸಲು ನಮ್ಮ ಸರ್ಕಾರ ಈಗ ಉನ್ನತಮಟ್ಟದ ತನಿಖಾ ತಂಡ ರಚಿಸಿದೆ ಎಂದು ಸಮರ್ಥನೆ ಮಾಡಿಕೊಂಡರು.

Tags:
error: Content is protected !!