Mysore
20
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಚಿತ್ರದುರ್ಗ: ಚಿಕ್ಕೆಬನ್ನೂರು ಬಳಿ ಭೀಕರ ಅಪಘಾತ, ಮೂವರ ಸಾವು

ಚಿತ್ರದುರ್ಗ: ತಾಲೂಕಿನ ಚಿಕ್ಕಬೆನ್ನೂರು ಗ್ರಾಮದ ಬಳಿ ಭೀಕರ ಅಪಘಾತ ಸಂಭವಿಸಿದ್ದು, 2 ವರ್ಷದ ಮಗು ಸೇರಿದಂತೆ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.

ಬೆಂಗಳೂರಿನ ಪ್ರಜ್ವಲ್‌ ರೆಡ್ಡಿ(30) ಹರ್ಷಿತಾ(28) ಸೋಹನ್(‌2) ಅಪಘಾತದಲ್ಲಿ ಮೃತಪಟ್ಟವರು.

ಬೆಂಗಳೂರಿನಿಂದ ಗೋವಾ ತೆರಳುತ್ತಿದ್ದ ವೇಳೆ ಚಿಕ್ಕಬೆನ್ನೂರು ಬಳಿ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಕಾರು ಜಖಂಗೊಂಡಿದೆ. ಇನ್ನುಳಿದ ನಾಲ್ವರು, ಶಿಲ್ಪಾ, ಸ್ವರ್ಣ ಜಾರ್ಜ್‌, ಮಧುಮಿತ, ವಿಜಯ್‌ ರೆಡ್ಡಿ ಅವರ ಸ್ಥೀತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags: