Mysore
21
broken clouds

Social Media

ಭಾನುವಾರ, 09 ಆಗಸ್ಟ್ 2026
Light
Dark

ಉಚ್ಚಾಟನೆಗೆ ಹೆದರಲ್ಲ – ಸ್ಪರ್ಧೆಯಿಂದ ಹಿಂದೆ ಸರಿಯಲ್ಲ: ಈಶ್ವರಪ್ಪ

ಶಿವಮೊಗ್ಗ: ಬಿಜೆಪಿ ಪಕ್ಷದ ಉಚ್ಚಾಟನೆಯಿಂದ ನಾನು ಹೆದರಲ್ಲ. ಚುನಾವಣೆಯಲ್ಲಿ ಗೆದ್ದು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್‌ ಈಶ್ವರಪ್ಪ ವಿಶ್ವಾಸದ ಮಾತುಗಳನ್ನಾಡಿದ್ದಾರೆ.

ಬಿಜೆಪಿ ಉಚ್ಚಾಟನೆ ಬಗ್ಗೆ ಸೋಮವಾರ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದ ಅವರು, ಬಿಜೆಪಿ ಉಚ್ಚಾಟನೆ ಬಗ್ಗೆ ನನಗೆ ಯಾವುದೇ ಆದೇಶ ತಲುಪಿಲ್ಲ. ಮಾಧ್ಯಮದಿಂದ ಗೊತ್ತಾಗಿದೆ.

ಚುನಾವಣೆಗೆ ಸ್ವರ್ಧಿಸುವುದು ಖಚಿತ, ಗೆಲ್ಲುವುದು ನಿಶ್ಚಿತ ಎಂದು ಹೇಳಿದ್ದೇನೆ. ಅದರಂತೆ ನಾನು ಕಣದಿಂದ ಹಿಂದೆ ಸರಿಯಲ್ಲ. ನಾಳೆಯಿಂದ ಇನ್ನಷ್ಟು ಚುರುಕಾಗಿ ಚುನಾವಣೆ ಪ್ರಚಾರ ಮಾಡುವೆ ಎಂದರು.

Tags:
error: Content is protected !!