ಬೆಂಗಳೂರು: ಶಿವಮೊಗ್ಗ ಬಿಜೆಪಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಬಳಸದೇ ತಾಕತ್ತಿದ್ದರೇ ಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲಿ ಎಂದು ಸವಾಲಾಕಿದ್ದರು. ಇದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಅವರಲ್ಲದೇ ಮತ್ಯಾರು ಮೋದಿ ಫೋಟೋ ಬಳಸಲು ಸಾಧ್ಯ ಎಂದು ಟಾಂಗ್ ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೆ.ಎಸ್ ಈಶ್ವರಪ್ಪ ಅವರ ಮಾತುಕೇಳಿ ನನಗೆ ಗಾಬರಿಯಾಯಿತು. ಬಿಜೆಪಿಯವರಾದ ನಾವು ಮೋದಿ ಚಿತ್ರ ಬಳಸದೇ ಮತ್ಯಾರು ಬಳಸಲು ಸಾಧ್ಯ ಎಂದು ಪ್ರಶ್ನೆ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ಮತು ಬಿಜೆಪಿಯ ಹೆಮ್ಮೆಯಾಗಿದ್ದಾರೆ. ಅವರ ಫೋಟೋವನ್ನು ನಾವು ಬಳಸದೇ ಬೇರೆ ಯಾರು ಬಳಸಬೇಕು ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಶಿವಮೊಗ್ಗ ಚುನಾವಣೆಯಲ್ಲಿ ನಾವು ಎರಡು ಅಂಶಗಳ ಮೇಲೆ ಮತಯಾಚನೆ ಮಾಡುತ್ತಿದ್ದೇವೆ. ಮೊದಲನೆಯದಾಗಿ ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಸಾಧನೆ ಆಧಾರದಲ್ಲಿ ಮತ್ತೊಂದು ಅಲ್ಲಿನ ಕ್ರೀಯಾಶೀಲಾ ಸಂಸದ ಬಿ.ವೈ ರಾಘವೇಂದ್ರ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಜನರ ಮುಂದಿಟ್ಟು ಮತಯಾವಚಿಸುತ್ತೇವೆ ಎಂದು ತಿಳಿಸಿದರು.