Mysore
22
overcast clouds

Social Media

ಮಂಗಳವಾರ, 28 ಜುಲೈ 2026
Light
Dark

ಸಿದ್ದರಾಮಯ್ಯ ಜ್ಯೋತಿಷಿ ಆಗಿದ್ದು ಯಾವಾಗ : ಹೆಚ್‌.ಡಿ.ಕುಮಾರಸ್ವಾಮಿ ಟೀಕೆ

ಮೈಸೂರು : ಮುಖ್ಯಮಂತ್ರಿ ಹುದ್ದೆ ಬಿಟ್ಟು ಸಿದ್ದರಾಮಯ್ಯ ಜ್ಯೋತಿಷಿ ಆಗಿದ್ದು ಯಾವಾಗ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ.

ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಂಡ್ಯದಲ್ಲಿ ಕುಮಾರಸ್ವಾಮಿ ಗೆಲ್ಲಲು ಸಾಧ್ಯವಿಲ್ಲ ಎಂದು ಸಿದ್ದರಾಮಯ್ಯ ಅವರು ನೀಡಿದ್ದ ಹೇಳಿಕೆಗೆ ಉತ್ತರ ನೀಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸುವುದನ್ನು ಬಿಟ್ಟು ಜ್ಯೋತಿಷಿ ಹೇಳುವ ಕೆಲಸ ಯಾವಾಗ ಪ್ರಾರಂಭ ಮಾಡಿದ್ದಾರೋ ಗೊತ್ತಿಲ್ಲ ಎಂದು ಟೀಕೆ ಮಾಡಿದರು.

ಸಿದ್ದರಾಮಯ್ಯ ಅವರ ಜ್ಯೋತಿಷ್ಯದ ಫಲಿತಾಂಷ ಏನಾಗುತ್ತದೆ! ಮಂಡ್ಯ ಜನತೆ ಯಾವ ತೀರ್ಮಾನ ನೀಡುತ್ತಾರೆ ಎಂದು ಚುನಾವಣೆಯಲ್ಲಿ ನೋಡೋಣ ಎಂದು ಕುಮಾರಸ್ವಾಮಿ ತಿಳಿಸಿದರು.

Tags:
error: Content is protected !!