Mysore
25
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ನನ್ನ ಆಯಸ್ಸನ್ನು ದೇವರು ನನ್ನ ತಂದೆಗೆ ದಾರೆ ಎರೆಯಲಿ : ನಿಖಿಲ್‌ ಕುಮಾರಸ್ವಾಮಿ

ಮಂಡ್ಯ : ರಾಜ್ಯದ ಜನರಿಗಾಗಿ ಒಳ್ಳೆಯ ಕೆಲಸ ಮಾಡಲು ನನ್ನ ಆಯಸ್ಸನ್ನೂ ದೇವರು ಕುಮಾರಣ್ಣ ಅವರಿಗೆ ದಾರೆಯೆರೆಯಲಿ ಎಂದು ನಿಖಿಲ್‌ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ನಡೆದ ಲೋಕಸಭಾ ಚುನಾವಣೆಯ ಹಿನ್ನಲೆ ಜೆಡಿಎಸ್‌ ಕಾರ್ಯಕರ್ತರ ಪೂರ್ವಭಾವಿ ಸಭೆಯ ಉದ್ದೇಶಿಸಿ ಮಾತನಾಡಿದ ಅವರು, ೬೪ ವರ್ಷದ ಕುಮಾರಣ್ಣ ಎರಡು ಬಾರಿ ಹೃದಯ ಶಸ್ತ್ರ ಚಿಕಿತ್ಸೆಯಾಗಿದ್ದರೂ ಏಕಾಂಗಿಯಾಗಿ ಪಕ್ಷದ ಕಾರ್ಯಕರ್ತರ ಬೆಂಬಲದಿಂದ ಪಕ್ಷ ಕಟ್ಟುತ್ತಿದ್ದಾರೆ ಎಂದರು.

ನಾನು ಒಬ್ಬ ಮಗನಾಗಿ, ಕುಮಾರಣ್ಣ ಅವರಿಗೆ ಭಗವಂತ ಇನ್ನಷ್ಟು ಶಕ್ತಿ ಆರೋಗ್ಯ ನೀಡುವ ಮೂಲಕ ಪಕ್ಷವನ್ನು ಕಟ್ಟಿ ಇನ್ನಷ್ಟು ವರ್ಷ ಮುನ್ನಡೆಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಆಶಯ ವ್ಯಕ್ತಪಡಿಸಿದರು.

ಈ ವೇಳೇ ನಿಖಿಲ್‌ ಕುಮಾರಸ್ವಾಮಿ ಮಾತುಗಳನ್ನು ಕೇಳಿ ವೇದಿಕೆಯ ಮೇಲಿದ್ದ ಕುಮಾರಸ್ವಾಮಿ ಭಾವುಕರಾದರು.

Tags: