Mysore
22
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ತಾವು ಓದಿದ ಶಾಲೆಗಳ ಅಭಿವೃದ್ದಿಗೆ ಸಿಎಂ ಸಿದ್ದರಾಮಯ್ಯ ತಲಾ ೧೦ ಲಕ್ಷ ದೇಣಿಗೆ !

ಮೈಸೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾಭ್ಯಾಸ ಮಾಡಿದ್ದ ಶಾಲೆಯ ಅಭಿವೃದ್ಧಿಗೆ ತಲಾ ೧೦.ಲಕ್ಷ ರೂ. ವೈಯಕ್ತಿಕ ನೆರವು ನೀಡಿದ್ದಾರೆ.

ತಾವು ವಿದ್ಯಾಭ್ಯಾಸ ಮಾಡಿದ್ದ ಕುಪ್ಪೆಗಾಲ ಹಾಗೂ ಸಿದ್ದರಾಮಯ್ಯನ ಹುಂಡಿಯ ಸರ್ಕಾರಿ ಶಾಲೆಗಳ ಅಭಿವೃದ್ದಿಗೆ ವೈಯಕ್ತಿಕ ನೆರವು ನೀಡುವ ಮೂಲಕ ಮಾದರಿಯಾಗಿದ್ದಾರೆ.

ರಾಜ್ಯ ಕಾಂಗ್ರೆಸ್‌ ಸರ್ಕಾರ ಶಾಲೆಗಳ ಅಭಿವೃದ್ದಿಗಾಗಿಯೇ ʼನನ್ನ ಶಾಲೆ ನನ್ನ ಅಭಿವೃದ್ದಿʼ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸದೆ. ಈ ಮೂಲಕ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳೆ ಶಾಲೆಯ ಅಭಿವೃದ್ದಿಗೆ ನೆರವಾಗುವ ಜವಬ್ದಾರಿ ನೀಡಲಾಗುತ್ತಿದೆ.

ಈ ಒಂದು ಯೋಜನೆಗೆ ಮಾ.೭ರಂದು ಚಾಲನೆ ದೊರಕಲಿದ್ದು, ತಾವು ಓದಿದ ಶಾಲೆಗೆ ಧೇಣಿಗೆ ನೀಡುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ರವಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಓದಿದ ಶಾಲೆಯ ಅಭಿವೃದ್ದಿಗೆ ನೆರವಾಗಿರುವುದು ಇದೇ ಮೊದಲಲ್ಲ.

ಈ ಹಿಂದೆ ೨೦೧೫ರಲ್ಲಿ ತಾವು ವಿದ್ಯಾಭ್ಯಾಸ ಮಾಡಿದ್ದ ಶಾಲೆಗೆ ೧ ಎಕ್ಕರೆ ಜಾಗ ನೀಡಿ, ೮ ಕೊಠಡಿ, ೨ ಶೌಚಾಲಯ ಇರುವ ಹೊಸ ಕಟ್ಟಡ ಕಟ್ಟಿಸುವ ಮೂಲಕ ಶಾಲೆಯನ್ನು ಉನ್ನತೀಕರಿಸಿದ್ದರು ಎಂದರು.

ಈಗ ಮುಖ್ಯಮಂತ್ರಿಗಳು ನೀಡುವ ದೇಣಿಗೆಯಿಂದ ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ಗಳನ್ನು ನಡೆಸಲು ಸ್ಮಾರ್ಟ್‌ ಟಿವಿ, ಪ್ರೊಜೆಕ್ಟರ್‌, ಕುರ್ಚಿ, ಮೇಜು ಸೇರಿದಂತೆ ಅಗತ್ಯ ಪರಿಕರಗಳನ್ನು ತರಲಾಗುವುದು ಎಂದು ಅವರು ತಿಳಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!