Mysore
30
broken clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಹುಡುಗಿ ಚುಡಾಯಿಸಿದ ವಿಚಾರದಲ್ಲಿ ಜಗಳ; ಆಟೊ ಡ್ರೈವರ್‌ ಕೊಲೆ

ಹುಡುಗಿ ಚುಡಾಯಿಸಿದ ಹಳೆ ದ್ವೇಷದ ಹಿನ್ನೆಲೆಯಲ್ಲಿ ರೌಡಿ ಶೀಟರ್‌ ತನ್ನ ಸಹೋದರ ಮತ್ತು ಸಂಬಂಧಿಕನ ಜತೆ ಸೇರಿ ಆಟೊ ಡ್ರೈವರ್‌ನನ್ನು ಕೊಲೆ ಮಾಡಿದ ಘಟನೆ ಮೈಸೂರಿನ ಮಂಡಕಳ್ಳಿಯಲ್ಲಿ ನಡೆದಿದೆ.

ರೌಡಿ ಶೀಟರ್‌ ಸುನಿಲ್‌ ರಾಜ್‌ ಹಾಗೂ ಆತನ ತಮ್ಮ ನಿಖಿಲ್‌ ರಾಜ್‌ ಮತ್ತು ಚಿಕ್ಕಪ್ಪ ನಾರಾಯಣ ಕೊಲೆ ಆರೋಪಿಗಳಾಗಿದ್ದು, ಗೂಡ್ಸ್‌ ಆಟೊ ಡ್ರೈವರ್‌ ರವಿಚಂದ್ರ ( 33 ) ಮೃತ ದುರ್ದೈವಿ. ರವಿಚಂದ್ರನ ಸಹೋದರ ಶಿವರಾಜ್‌ ಗಾರೆ ಕೆಲಸ ಮಾಡಿಕೊಂಡಿದ್ದು ಆತನ ಸ್ನೇಹಿತನೊಬ್ಬ ರೌಡಿ ಶೀಟರ್‌ ಸುನಿಲ್‌ ರಾಜ್‌ಗೆ ಪರಿಚಯವಿದ್ದ ಹುಡುಗಿಯೊಬ್ಬಳನ್ನು ಚುಡಾಯಿಸಿದ್ದ.

ಈ ಸಂಬಂಧ ಗಲಾಟೆಯಾದಾಗ ಶಿವರಾಜ್‌ ಮಧ್ಯ ಪ್ರವೇಶಿಸಿ ಗಲಾಟೆ ಬಿಡಿಸಿದ್ದು, ಇದರ ದ್ವೇಷ ಇಟ್ಟುಕೊಂಡಿದ್ದ ಸುನಿಲ್‌ ರಾಜ್‌ ನಿನ್ನೆ ( ಜನವರಿ 26 ) ರಾತ್ರಿ ತನ್ನ ಸಹೋದರ ಹಾಗೂ ಚಿಕ್ಕಪ್ಪನ ಜತೆಗೂಡಿ ರವಿಚಂದ್ರ ಮನೆ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು ಸುನಿಲ್‌ ರಾಜ್‌ ಡ್ರಾಗನ್‌ನಿಂದ ರವಿಚಂದ್ರನ ಹೊಟ್ಟೆ ಭಾಗಕ್ಕೆ ಇರಿದಿದ್ದಾನೆ. ಅಲ್ಲದೇ ಶಿವರಾಜ್‌ ಹಾಗೂ ರವಿಚಂದ್ರನ ಮಾವ ಮಹೇಶ್‌ಗೂ ಗಾಯಗಳಾಗಿವೆ. ರವಿಚಂದ್ರನನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಆರೋಪಿಗಳ ವಿರುದ್ಧ ಮೈಸೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!