Mysore
30
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಮಕರ ಸಂಕ್ರಾಂತಿ ಹಬ್ಬ: ಗೋವುಗಳಿಗೆ ಹುಲ್ಲು-ಬೆಲ್ಲ ತಿನ್ನಿಸಿದ ಪ್ರಧಾನಿ ಮೋದಿ

ಮಕರ ಸಂಕ್ರಾಂತಿಯ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿರುವ ಗೋವುಗಳಿಗೆ ಹುಲ್ಲು ಹಾಗೂ ಬೆಲ್ಲವನ್ನು ತಿನ್ನಿಸಿದರು ಎಂದು ndtv ವರದಿ ಮಾಡಿದೆ.

ಇದಕ್ಕೂ ಮುನ್ನ, ಪೊಂಗಲ್ ಹಬ್ಬವು ರಾಷ್ಟ್ರೀಯ ಸ್ಫೂರ್ತಿಯಾದ ಒಂದು ಭಾರತ, ಶ್ರೇಷ್ಠ ಭಾರತವನ್ನು ಪ್ರತಿಫಲಿಸುತ್ತದೆ ಹಾಗೂ ಈ ಭಾವನಾತ್ಮಕ ಸಂಪರ್ಕವನ್ನು ಕಾಶಿ ತಮಿಳು ಹಾಗೂ ಸೌರಾಷ್ಟ್ರ ತಮಿಳು ಸಂಘಗಳಲ್ಲಿ ಕಾಣಬಹುದು” ಎಂದು ಭಾನುವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು.

ಕೇಂದ್ರ ಸಚಿವ ಎಲ್.ಮುರುಗನ್ ನಿವಾಸದಲ್ಲಿ ಪೊಂಗಲ್ ಸಂಭ್ರಮಾಚರಣೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ತಮಿಳುನಾಡಿನ ಪ್ರತಿ ಮನೆಯಲ್ಲೂ ಹಬ್ಬದ ಸಂಭ್ರಮ ಮನೆ ಮಾಡಿದೆ. ಎಲ್ಲರಿಗೂ ಜೀವನದಲ್ಲಿ ಸಂತೋಷ, ಸಮೃದ್ಧಿ ಹಾಗೂ ಸಂತೃಪ್ತಿ ದೊರೆಯಲಿ ಎಂದು ಹಾರೈಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!