ಚಿಕ್ಕಬಳ್ಳಾಪುರ : ಪಟಾಕಿ ಸಿಡಿಸುವ ವೇಳೆ ಹಾರಿದ ಕಿಡಿಯಿಂದ ಗುಜುರಿ ಅಂಗಡಿ ಬೆಂಕಿಗೆ ಆಹುತಿಯಾಗಿರುವ ಘಟನೆ ಚಿಕ್ಕಬಳ್ಳಾಪುರದ ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ವಿಜಯಪುರ ಪಟ್ಟಣದ ಬೈಪಾಸ್ ರೋಡ್ ನಲ್ಲಿರುವ ಮಂಡಿ ಬೆಲೆ ರಸ್ತೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಬೆಂಕಿಯ ಕೆನ್ನಾಲಿಗೆ ಗುಜರಿ ಅಂಗಡಿಯಲ್ಲಿದ್ದ ವಸ್ತುಗಳು ಸಂಪೂರ್ಣ ಸುಟ್ಟು ಭಸ್ಮವಾಗಿವೆ.
ಭರತ್ ನಗರದ ಮುಬಾರಕ್ ಎಂಬುವವರಿಗೆ ಸೇರಿದ್ದ ಗುಜರಿ ಅಂಗಡಿಯ ಮೇಲೆ ಪಟಾಕಿ ಕಿಡಿ ಬಿದ್ದು ಈ ಅವಘಡ ಸಂಭವಿಸಿದೆ. ಇದರಿಂದ ಸುಮಾರು ಮೂರರಿಂದ ನಾಲ್ಕು ಲಕ್ಷ ರೂಪಾಯಿ ಹಾಳಾಗಿದೆ ಎಂದು ಅಂಗಡಿಯ ಮಾಲಿಕ ತಿಳಿಸಿದ್ದಾರೆ.
ಇನ್ನು ದೇವನಹಳ್ಳಿಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದ್ದಾರೆ.