Mysore
17
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಪಿಎಸ್ಐ ಪುತ್ರನ ಪುಂಡಾಟಕ್ಕೆ ಕುರಿಗಾಹಿಬಲಿ

ಮೈಸೂರು : ಮಹಿಳಾ ಪಿಎಸ್ಐ ಪುತ್ರನ ಪುಂಡಾಟಕ್ಕೆ‌ ಅಮಾಯಕ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ.
ವೀಲಿಂಗ್ ಮಾಡಿ ವೃದ್ದನ ಬಲಿ ಪಡೆದ ಪಿಎಸ್ ಐ ಪುತ್ರ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಹಿಮ್ಮಾವು ಬಳಿ ಘಟನೆ.ಗುರುಸ್ವಾಮಿ(68) ಮೃತ ವೃದ್ದ.

ಹಸುಗಳನ್ನು ಮೇಯಿಸಿ ಮನೆಗೆ ತೆರಳುತ್ತಿದ್ದ ವೇಳೆ ನಡೆದ ಘಟನೆ.ವೀಲಿಂಗ್ ಮಾಡಿಕೊಂಡು ಬಂದು ಡಿಕ್ಕಿಯೊಡೆದ ಯುವಕ ಸೈಯದ್ ಐಮಾನ್ಉದಯಗಿರಿ ನಿವಾಸಿ.
ಸೈಯದ್ ಐಮಾನ್ ಪಿಎಸ್ ಐ ಯಾಸ್ಮಿನ್ ತಾಜ್ ಪುತ್ರ.
ಯಾಸ್ಮಿನ್ ತಾಜ್ ನಂಜನಗೂಡು ಸಂಚಾರಿ ಪೊಲೀಸ್ ಠಾಣೆ ಪಿಎಸ್ ಐ.ಕಳೆದ ಕೆಲ ದಿನಗಳ ಹಿಂದೆ ವೀಲಿಂಗ್ ವಿಚಾರಕ್ಕೆ ವಶಕ್ಕೆ ಪಡೆದು ದಂಡ ಹಾಕಲಾಗಿತ್ತು.
ಇದಷ್ಟೆ ಅಲ್ಲದೆ ಈತನ ವಿರುದ್ಧ ಕಳ್ಳತನ ಆರೋಪ ಕೂಡ ಇತ್ತು.

ಸದ್ಯ ಆರೋಪಿ‌ ಸೈಯದ್ ಐಮಾನ್ ಗೆ ಸಣ್ಣಪುಟ್ಟ ಗಾಯ.ಅಪಘಾತಕೊಳಗಾದ ಕುಟುಂಬಸ್ಥರಿಂದಲೆ‌ ರಕ್ಷಣೆ ಮಾಡಿ ಚಿಕಿತ್ಸೆಗೆ ಕರೆತಂದ ಕುಟುಂಬಸ್ಥರು.
ನಮಗೆ ನ್ಯಾಯ ಕೊಡಿಸಿ ಎಂದು ಆಗ್ರಹಿಸಿದ ಕುಟುಂಬಸ್ಥರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!