Mysore
26
haze

Social Media

ಶನಿವಾರ, 20 ಡಿಸೆಂಬರ್ 2025
Light
Dark

ಮುಂಗಡ ಪತ್ರ: ವಿಶೇಷವೇನಿಲ್ಲ, ವಿಶೇಷ ಎಂದರೆ…

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸುವ ಮುಂಗಡಪತ್ರವನ್ನು ಚಾತಕ ಪಕ್ಷಿಯಂತೆ ಕಾಯುತ್ತಿತ್ತು ಚಿತ್ರೋದ್ಯಮಈ ಬಾರಿ ಅವರು ಹೊಸದೇನನ್ನೂ ಚಿತ್ರೋದ್ಯಮಕ್ಕೆ ಸಂಬಂಧಿಸಿದಂತೆ ಹೇಳಿಲ್ಲ.

2015 -16ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಜಾಗತಿಕ ಮಟ್ಟದ ಚಿತ್ರನಗರಿಯನ್ನು ಸ್ಥಾಪಿಸುವುದಾಗಿ ಘೋಷಿಸಲಾಗಿತ್ತುನಂತರದ ಸರ್ಕಾರವು ಸದರಿ ಯೋಜನೆಯನ್ನು ಬೆಂಗಳೂರಿಗೆ ವರ್ಗಾಯಿಸಲು ಉದ್ದೇಶಿಸಿತ್ತುಆದರೆ ಇಲ್ಲಿಯವರೆಗೂ ಅನುಷ್ಠಾನಗೊಳಿಸಿರುವುದಿಲ್ಲನಮ್ಮ ಸರ್ಕಾರವು ಹಿಂದೆ ಘೋಷಿಸಿದಂತೆ ಮೈಸೂರು ಜಿಲ್ಲೆಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಚಿತ್ರನಗರಿಯನ್ನು ನಿರ್ಮಿಸಲಿದೆ.

ಬೆಂಗಳೂರಿನಲ್ಲಿರುವ ಡಾ.ರಾಜಕುಮಾರ್ ಸ್ಮಾರಕದ ಬಳಿ ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತುಸಂಗ್ರಹಾಲಯವನ್ನು ನಿರ್ಮಿಸಲಾಗುವುದು.

ಕಳೆದ ಮೂರು ವರ್ಷಗಳಿಂದ ಕನ್ನಡದ ಗುಣಾತ್ಮಕ ಚಿತ್ರಗಳಿಗೆ ಸಹಾಯಧನ ನೀಡುವ ಯೋಜನೆ ಸ್ಥಗಿತಗೊಂಡಿತ್ತುಈ ಬಾರಿ ಆಯ್ಕೆ ಸಮಿತಿಗಳನ್ನು ರಚಿಸಿಸಹಾಯಧನ ನೀಡಲು ಕ್ರಮ ಕೈಗೊಳ್ಳಲಾಗುವುದು’ – ಇವು ಚಿತ್ರೋದ್ಯಮಕ್ಕೆ ಸಂಬಂಽಸಿದಂತೆ ಮುಂಗಡ ಪತ್ರದಲ್ಲಿ ಹೇಳಿರುವ ಪ್ರಸ್ತಾವನೆಗಳು.

ಚಿತ್ರನಗರಿ ಯೋಜನೆ ಈಗಾಗಲೇ ಹೇಳಿರುವಂತೆ ಐದು ದಶಕಗಳಿಗೂ ಹಿಂದಿನ ಯೋಜನೆಆ ನಂತರ ಬಂದ ಸರ್ಕಾರಗಳ ನಿರಾಸಕ್ತಿಯೋಉದ್ಯಮದ ಇಚ್ಛಾಶಕ್ತಿಯ ಕೊರತೆಯೋಇನ್ನೇನೋ ಒಟ್ಟಿನಲ್ಲಿ ಅದು ಕಾರ್ಯಗತವಾಗಿಲ್ಲಮೈಸೂರಿನ ಇಮ್ಮಾವಿನಲ್ಲಿ ಈಗಾಗಲೇ ಚಿತ್ರನಗರಿಗಾಗಿ 110 ಎಕರೆ ಜಾಗವನ್ನು ಗುರುತಿಸಲಾಗಿದ್ದುಆ ನಿಟ್ಟಿನಲ್ಲಿ ಕೆಲಸಗಳು ಸಾಗತೊಡಗಿವೆ ಎನ್ನಲಾಗಿದೆಚಿತ್ರನಗರಿಯ ನೀಲಿನಕ್ಷೆಜಾಗತಿಕ ಟೆಂಡರ್ ಕರೆಯುವುದೇ ಮೊದಲಾದ ಕೆಲಸಗಳು ಇನ್ನು ಆರಂಭವಾಗಬಹುದುಚಿತ್ರನಗರಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿದೆ ಎಂದು ಮುಂಗಡ ಪತ್ರದಲ್ಲಿ ಹೇಳಲಾಗಿದೆ.

ಕನ್ನಡ ಚಿತ್ರರಂಗ ಬೆಳೆದು ಬಂದ ಇತಿಹಾಸವನ್ನು ದಾಖಲಿಸುವ ವಸ್ತುಸಂಗ್ರಹಾಲಯವನ್ನು ಡಾ.ರಾಜಕುಮಾರ್ ಸ್ಮಾರಕದ ಬಳಿ ನಿರ್ಮಿಸುವುದಾಗಿ ಹೇಳಲಾಗಿದೆಸ್ಮಾರಕದಲ್ಲಿ ಡಾ.ರಾಜಕುಮಾರ್ ಅವರು ನಡೆದು ಬಂದ ದಾರಿಯ ಕುರಿತಂತೆ ಹೇಳುವ ಸಂಗ್ರಹಾಲಯವನ್ನು ಸ್ಥಾಪಿಸುವುದುಮೊದಲು ಇದ್ದ ಯೋಜನೆರಾಜಕುಮಾರ್ ಅವರ ಜೀವಿತ ಕಾಲದಲ್ಲೇ ಇಂತಹದೊಂದು ಸಂಗ್ರಹಾಲಯದ ಯೋಚನೆ ಅವರ ಕುಟುಂಬಕ್ಕೇ ಇತ್ತುಅದಕ್ಕಾಗಿ ರಾಜಕುಮಾರ್ ಅವರಿಗೆ ಸಂಬಂಧಪಟ್ಟಂತೆ ತಮ್ಮಲ್ಲಿರುವ ಸಂಗ್ರಹ ಯೋಗ್ಯ ವಸ್ತುಗಳನ್ನು ನೀಡಲು ಅವರ ಸಂಸ್ಥೆ ಸಾರ್ವಜನಿಕರಿಗೆ ಕರೆ ನೀಡಿತ್ತುಅದಕ್ಕಾಗಿಗಾಂಽನಗರದ ಹೋಟೆಲೊಂದರಲ್ಲಿ ಕಚೇರಿಯನ್ನೂ ತೆರೆದಿತ್ತುಇದೀಗ ಚಲನಚಿತ್ರ ನಡೆದು ಬಂದ ಇತಿಹಾಸದ ಕುರಿತಂತೆ ವಸ್ತು ಸಂಗ್ರಹಾಲಯ ಸ್ಥಾಪನೆಯ ಬಗ್ಗೆ ಹೇಳಲಾಗಿದೆ.

ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಯೋಜಿತ ಸಿನಿಮಾ ಭಂಡಾರವೂ ಕನ್ನಡ ಚಿತ್ರರಂಗ ನಡೆದು ಬಂದ ದಾರಿಯನ್ನು ಹೇಳುವ ಪ್ರಾಚ್ಯಾಗಾರ ಎನ್ನುವುದಿತ್ತುಅಕಾಡೆಮಿ ಇರುವ ನಂದಿನಿ ಬಡಾವಣೆಯ ಕಟ್ಟಡದ ತಳಮಹಡಿಯಲ್ಲಿ ಇದಕ್ಕೆ ಬೇಕಾದ ಕೆಲಸಗಳು ನಡೆದಿವೆಹಳೆಯ ಚಿತ್ರಗಳ ಪ್ರಿಂಟ್‌ಗಳನ್ನು ಜೋಪಾನವಾಗಿರಿಸಲು ಹವಾನಿಯಂತ್ರಣ ವ್ಯವಸ್ಥೆಗ್ರಂಥಾಲಯಕ್ಕೆ ಬೇಕಾದ ಕಪಾಟುವಗೈರೆ ಮುಂತಾಗಿ ಅಲ್ಲಿ ಸಿದ್ಧವಾಗುತ್ತಿದೆಹಳೆಯ ನೆಗೆಟಿವ್‌ಗಳನ್ನು ಸಂಗ್ರಹಿಸಿಅದನ್ನು ಹಿಂದಿನಂತೆ ಮಾಡಲು ತಗಲುವ ವೆಚ್ಚ ಮತ್ತಿತರ ಬಾಬತ್ತುಗಳಿಗಾಗಿ ಸರ್ಕಾರದಿಂದ ಅನುದಾನ ನಿರೀಕ್ಷಿಸಲಾಗಿತ್ತು ಎನ್ನುತ್ತಿವೆ ಮೂಲಗಳುಮುಂದೇನಾಗುತ್ತದೋ ನೋಡಬೇಕು.

ಸಹಾಯಧನದ ವಿಷಯ. 2019ರಿಂದ 2022ರವರೆಗೆಅಂದರೆ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತಯಾರಾದ ಚಲನಚಿತ್ರಗಳಲ್ಲಿ ಸಹಾಯಧನಕ್ಕಾಗಿ ಗುಣಮಟ್ಟದ ಚಿತ್ರಗಳ ಆಯ್ಕೆ ಆಗಿಲ್ಲಸಹಾಯಧನ ನೀಡುವ ಚಿತ್ರಗಳ ಸಂಖ್ಯೆಯಲ್ಲಿ ಏರಿಕೆಯೋ ಇಳಿಕೆಯೋ ಇಲ್ಲದೆ ಇರುವುದರಿಂದಮುಂಗಡ ಪತ್ರದಲ್ಲಿ ಈ ಪ್ರಸ್ತಾಪದ ಅಗತ್ಯ ಇತ್ತೇ ಎನ್ನುವ ಪ್ರಶ್ನೆಯೂ ಇದೆಸಹಾಯಧನ ಮಾತ್ರವಲ್ಲಪ್ರಶಸ್ತಿಗಳ ಆಯ್ಕೆಪ್ರದಾನವೂ ಈ ಅವಧಿಯದ್ದು ಆಗಬೇಕುನಾಲ್ಕು ವರ್ಷಗಳಎರಡೆರಡು ಆಯ್ಕೆ ಸಮಿತಿಗಳ ರಚನೆಚಿತ್ರಗಳ ವೀಕ್ಷಣೆಗೆ ಕನಿಷ್ಠ ಎಂದರೂ ಆರೆಂಟು ತಿಂಗಳ ಸಮಯ ಬೇಕಾಗಬಹುದುಇರಲಿ.

ಮುಂಗಡ ಪತ್ರದಲ್ಲಿ ವಿಶೇಷಗಳೇನೂ ಇಲ್ಲಮಾಧ್ಯಮಗಳಿಗೆ ಅದರಲ್ಲೂ ನವಮಾಧ್ಯಮಗಳಿಗೆ ತಮಗೆ ಬೇಕಾದಂತೆ ರೋಚಕವಾಗಿ ಹೇಳಲು ಸುದೀಪ್ ಪ್ರಸಂಗ ಇದೆನಟ ಸುದೀಪ್ ಅವರು ಈಗಾಗಲೇವೃಥಾ ತಮ್ಮ ಮೇಲೆ ಹೊರಿಸಲಾದ ಆರೋಪಅದರಿಂದಾದ ನೋವುತಮ್ಮ ವರ್ಚಸ್ಸಿಗೆ ಆದ ಧಕ್ಕೆ ಇವುಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆವಾಣಿಜ್ಯ ಮಂಡಳಿಯಾಗಲಿನಿರ್ಮಾಪಕರ ಸಂಘವಾಗಲಿಯಾವುದೇ ತೀರ್ಮಾನ ತೆಗೆದುಕೊಳ್ಳುವಾಗ ಪೂರ್ವಾಪರ ಯೋಚನೆಸಾಕ್ಷ ಇತ್ಯಾದಿಗಳನ್ನು ಪರಿಶೀಲಿಸಬೇಕು ಎಂದೂ ಹೇಳಿದ್ದಾರೆಚಿತ್ರೋದ್ಯಮದ ಸಂಸ್ಥೆಗಳಾದ ವಾಣಿಜ್ಯ ಮಂಡಳಿನಿರ್ಮಾಪಕರ ಸಂಘ ಮತ್ತು ಕಲಾವಿದರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಈ ಪತ್ರವನ್ನು ಅವರು ಬರೆದಿದ್ದಾರೆ.

ನಿರ್ಮಾಪಕ ಎನ್.ಕುಮಾರ್ ಅವರುಸುದೀಪ್ ಮುಂದಿನ ಚಿತ್ರದಲ್ಲಿ ನಟಿಸಲು ಒಪ್ಪಿ ಸಂಭಾವನೆಯ ಪೂರ್ತಿ ಮೊತ್ತವನ್ನು ಪಡೆದಿದ್ದಾರೆಈಗ ಕಾಲ್‌ಶೀಟ್ ಕೊಡುವುದಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರುಅದಕ್ಕೆ ವಕೀಲರ ಮೂಲಕ ಮಾನನಷ್ಟ ದಾವೆ ಹೂಡುವ ಪತ್ರದ ಮೂಲಕ ಸುದೀಪ್ ಉತ್ತರ ನೀಡಿದ್ದರು.

ಕುಮಾರ್ ಅವರು ಪತ್ರಿಕಾಗೋಷ್ಠಿ ಕರೆದ ಬೆನ್ನಲ್ಲೇನಿರ್ಮಾಪಕ ರೆಹಮಾನ್ ಅವರು ಕೂಡ ಪತ್ರಿಕಾಗೋಷ್ಠಿ ಕರೆದರುಅವರ ಆರೋಪತಾವು ಸುದೀಪ್ ಸಲಹೆಯಂತೆ ಬೇರೆ ಭಾಷೆಗಳಲ್ಲಿ ತಯಾರಾಗಿ ಯಶಸ್ವಿಯಾದ ಚಿತ್ರಗಳ ಕನ್ನಡ ನಿರ್ಮಾಣದ ಹಕ್ಕುಗಳನ್ನು ಕೊಂಡುಕೊಂಡದ್ದರಿಂದ ಆದ ನಷ್ಟದ ಕುರಿತಾಗಿತ್ತುಸುದೀಪ್ ಅವರಿಂದಾಗಿ ತಮಗೆ ನಷ್ಟ ಆಗಿದೆಅವರಿಂದ ತಮಗೆ ಹಣ ಬರಬೇಕಾಗಿದೆ ಎಂದು ರೆಹಮಾನ್ ಅವರಿಗೆ ಈ ಮೊದಲೇ ತಿಳಿದಿರಲಿಲ್ಲವೇಕುಮಾರ್ ಪತ್ರಿಕಾಗೋಷ್ಠಿ ಕರೆದಾಗ ನೆನಪಾಯಿತೇಮುಂತಾಗಿ ಈಗ ಪ್ರಶ್ನೆಗಳೆದ್ದಿವೆಹ್ಞಾಂಚಿತ್ರನಿರ್ಮಾಣದಿಂದ ಸದ್ಯ ದೂರವಿರುವ ರೆಹಮಾನ್ ಅವರು ‘ಹುಚ್ಚ’, ‘ಯಜಮಾನ’ ಖ್ಯಾತಿಯ ನಿರ್ಮಾಪಕರು.

ಈ ಎರಡು ಪತ್ರಿಕಾಗೋಷ್ಠಿಗಳುಅದಕ್ಕೆ ಉತ್ತರವೋ ಎನ್ನುವಂತೆ ಜಾಕ್ ಮಂಜು ಅವರು ಸುದೀಪ್ ಪರವಾಗಿ ಕರೆದ ಪತ್ರಿಕಾಗೋಷ್ಠಿ ಎಲ್ಲವೂ ಚಿತ್ರರಂಗದ ಒಳಗಿನ ಎಲ್ಲವನ್ನೂ ಬೀದಿಗೆ ತಂದು ನಿಲ್ಲಿಸಿದೆಕನ್ನಡ ಮಾತ್ರವಲ್ಲಬಹುತೇಕ ಎಲ್ಲ ಭಾರತೀಯ ಭಾಷೆಗಳ ಚಿತ್ರರಂಗಗಳಲ್ಲೂ ಸಿನಿಮಾ ವ್ಯವಹಾರ ಪಾರದರ್ಶಕವಾಗಿ ನಡೆಯುವುದಿಲ್ಲ ಎನ್ನುವುದು ಬಲ್ಲಿದರ ಮಾತುಅಲ್ಲಿ ಕರಾರುಗಳು ಕಡಿಮೆಏನಿದ್ದರೂ ಮಾತಿನ ಮೇಲೆಯೇ ನಂಬಿಕೆ.

ಡಿಜಿಟಲ್ ಕ್ರಾಂತಿಯ ನಂತರ ಮನರಂಜನೋದ್ಯಮ ಕಾರ್ಪೊರೇಟ್ ಸಂಸ್ಕ ತಿಗೆ ಹೊರಳುತ್ತಿರುವ ಈ ದಿನಗಳಲ್ಲಿಕನ್ನಡ ಚಿತ್ರೋದ್ಯಮದಲ್ಲಿ ಬಹಳಷ್ಟು ಮಂದಿ ಹಳೆಯ ವ್ಯವಹಾರ ರೀತಿಗೆ ಜೋತು ಬಿದ್ದಾರೆ ಎನ್ನಲಾಗುತ್ತಿದೆಸಂಭಾವನೆಮಾರಾಟ ಎಲ್ಲದರಲ್ಲೂ ರಾಮಕೃಷ್ಣರ ಲೆಕ್ಕ ಇಲ್ಲಿ ಸಾಮಾನ್ಯ ಎನ್ನುವುದು ಹಿರಿಯರ ಮಾತುಅನುಭವಹೊಸ ರೀತಿಗೆ ಎಲ್ಲ ಉದ್ಯಮಿಗಳೂ ಹೊಂದಿಕೊಂಡಿಲ್ಲ.

ಚಿತ್ರನಿರ್ಮಾಣದ ಆರಂಭದ ದಿನಗಳಿಗೂ ಇಂದಿಗೂ ಅಜಗಜಾಂತರವಿದೆಆ ದಿನಗಳಲ್ಲಿ ಚಿತ್ರವೊಂದು ನಿರ್ಮಾಣವಾಗುತ್ತಲೇಅದನ್ನು ಹಂಚಿಕೆ ಮಾಡುವ ವಿತರಕರು ಯಾರು ಎನ್ನುವುದು ನಿರ್ಧಾರ ಆಗುತ್ತಿತ್ತುಅವರು ನಿರ್ಮಾಣ ಹಂತದಲ್ಲೇ ನಿರ್ಮಾಪಕರಿಗೆ ಹಣ ನೀಡುತ್ತಿದ್ದರುಪ್ರದರ್ಶಕರೂ ಆ ಚಿತ್ರ ತಂತಮ್ಮ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲು ಮುಂಗಡ ಕೊಡುತ್ತಿದ್ದರು. ‘ಬರುತ್ತದೆ’ ಎಂದು ಆ ಚಿತ್ರದ ಸ್ಲೆ ಡ್ ಚಿತ್ರದ ಆರಂಭ ಹಾಗೂ ಮಧ್ಯಂತರದಲ್ಲಿ ಕಾಣಬಹುದಿತ್ತು.

ವಿತರಕರ ಜಾಗಕ್ಕೆ ನಂತರ ಸಾಧಾರಣದಿಂದ ಮೀಟರ್ ಬಡ್ಡಿಯವರೆಗೆ ವಸೂಲು ಮಾಡುವ ಲೇವಾದೇವಿದಾರರು ಬಂದರುನಿಗದಿತ ದಿನದಂದು ತಾವು ಪಡೆದ ಹಣ ಹಿಂದಿರುಗಿಸಲಾರದೆನಿರ್ಮಾಪಕರೊಬ್ಬರು ಸಾವನ್ನಪ್ಪಿದ (ಕೊಲೆಯಾದಘಟನೆಯೂ ನಡೆದಿತ್ತು!

ಚಿತ್ರಗಳ ನಿರ್ಮಾಣಕ್ಕೆ ಬ್ಯಾಂಕುಗಳು ಸಾಲ ಕೊಡಲು ಆರಂಭಿಸಿದ ನಂತರನಿರ್ಮಾಪಕರು ದುಬಾರಿ ಬಡ್ಡಿಯಿಂದ ಇನ್ನು ತಪ್ಪಿಸಿಕೊಳ್ಳಬಹುದು ಎಂದುಕೊಂಡರುಆದರೆ ಹಾಗಾಗಲಿಲ್ಲಬೇಲಿಯೇ ಹೊಲ ಮೇಯ್ದಂತಹ ಪ್ರಸಂಗವೊಂದು ಕನ್ನಡ ಚಿತ್ರಗಳಿಗೆ ಬ್ಯಾಂಕ್ ನೆರವು ಸಿಗದಂತೆ ಮಾಡಿತು ಎನ್ನುತ್ತಾರೆ ಈ ಕುರಿತು ತೊಂದರೆಗೊಳಗಾದ ನಿರ್ಮಾಪಕರೊಬ್ಬರು.

ನಿರ್ಮಾಪಕನಟರ ನಡುವೆ ಇದ್ದ ಭಿನ್ನಾಭಿಪ್ರಾಯ ಬೀದಿಗೆ ಬಂದದ್ದನ್ನು ಯಾರೂ ಒಪ್ಪುವುದಿಲ್ಲ.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!