Mysore
22
overcast clouds

Social Media

ಗುರುವಾರ, 11 ಜೂನ್ 2026
Light
Dark

ಭವಿಷ್ಯದಲ್ಲಿ ಧೋನಿಯಂತಹ ನಾಯಕ ಸಿಗಲ್ಲ : ಗವಾಸ್ಕರ್

ನವದೆಹಲಿ: ಎಂತಹ ಕಠಿಣ ಪರಿಸ್ಥಿತಿಯಲ್ಲೂ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡುವ ಚಾಕಚಕ್ಯತೆ ಹೊಂದಿರುವ ಸಿಎಸ್‍ಕೆ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಒಬ್ಬ ಅದ್ಭುತ ನಾಯಕನಾಗಿದ್ದು ಭವಿಷ್ಯದಲ್ಲಿ ಇಂತಹ ನಾಯಕ ಸಿಗಲ್ಲ ಎಂದು ಭಾರತ ತಂಡದ ಮಾಜಿ ನಾಯಕ ಸುನೀಲ್ ಗವಾಸ್ಕರ್ ಅವರು ಶ್ಲಾಘಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ 200 ಪಂದ್ಯಗಳನ್ನು ಆಡುವ ಮೂಲಕ ಮಹಿ ವಿಶಿಷ್ಟ ದಾಖಲೆ ಬರೆದಿದ್ದಾರೆ. ತಮ್ಮ ನಾಯಕತ್ವದಲ್ಲಿ ಹಲವಾರು ಪಂದ್ಯಗಳನ್ನು ಸೋತಿದ್ದರೂ ಕೂಡ ಆ ಪಂದ್ಯಗಳಲ್ಲಿ ಎಂಎಸ್‍ಡಿ ಸೋಟಕ ಆಟವನ್ನು ನೀಡಿದ್ದಾರೆ' ಎಂದು ಸನ್ನಿ ಪ್ರಶಂಸಿಸಿದ್ದಾರೆ.

ಕಠಿಣ ಪರಿಸ್ಥಿತಿಯನ್ನು ಹೇಗೆ ದಿಟ್ಟವಾಗಿ ಎದುರಿಸಬೇಕೆಂಬುದನ್ನು ಸಿಎಸ್‍ಕೆ ಆಟಗಾರರು ತುಂಬಾ ಚೆನ್ನಾಗಿಯೇ ಕಂಡುಕೊಂಡಿದ್ದರೆ ಅದಕ್ಕೆ ಪ್ರಮುಖ ಕಾರಣವಾಗಿರುವುದು ಎಂಎಸ್‍ಡಿ ಅವರ ನಾಯಕತ್ವದ ಗುಣ’ ಎಂದು ಗವಾಸ್ಕರ್ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!