Mysore
23
overcast clouds

Social Media

ಶನಿವಾರ, 29 ಆಗಸ್ಟ್ 2026
Light
Dark

ಚೆಲುವರಾಯಸ್ವಾಮಿ ದರ್ಶನ ಪಡೆದ ನಟಿ ರಚಿತಾ ರಾಮ್

ಮೇಲುಕೋಟೆ: ನಟಿ ರಚಿತಾ ರಾಮ್ ಶುಕ್ರವಾರ ಮೇಲುಕೋಟೆ ಚೆಲುವನಾರಾಯಣಸ್ವಾಮಿಯ ದರ್ಶನ ಪಡೆದರು. ಬೆಳಿಗ್ಗೆ 9 ಗಂಟೆಯ ವೇಳೆಗೆ ಮೇಲುಕೋಟೆಗೆ ಬಂದ ರಚಿತಾ ಯದುಗಿರಿನಾಯಕಿ ಮಹಾಲಕ್ಷ್ಮಿ , ರಾವಾನುಜಾಚಾರ್ಯರ ದರ್ಶನ ಪಡೆದರು.

ದೇವಾಲಯದ ಅಮ್ಮನವರ ಸನ್ನಿಧಿಯ ಪ್ರಾಂಗಣದ ಶಿಲ್ಪಕಲಾ ಸೌಂದರ್ಯವನ್ನು ವೀಕ್ಷಿಸಿದ ರಚಿತಾರಾಮ್ ಮುಂಬರುವ ಮಾರ್ಚ್, ಏಪ್ರಿಲ್‌ನಲ್ಲಿ ನಡೆಯುವ ಹತ್ತು ದಿನಗಳ ವೈರಮುಡಿ ಜಾತ್ರಾ ಮಹೋತ್ಸವದಲ್ಲಿ ಒಂದು ದಿನ ಭಾಗವಹಿಸಿ ದೇವರ ದರ್ಶನ ಪಡೆದು ನನ್ನ ಕೈಲಾದ ಸೇವೆ ಮಾಡುತ್ತೇನೆ ಎಂದರು.

ಈ ವೇಳೆ ದೇವಾಲಯದ ಪರಂಪರೆ, ಸಂಸ್ಕೃತಿ ಹಾಗೂ ವೈರಮುಡಿ ಉತ್ಸವದ ವಿಶೇಷಗಳ ಬಗ್ಗೆ ರಚಿತಾ ಅವರಿಗೆ ಮಾಹಿತಿ ನೀಡಿದ ಸ್ಥಾನೀಕಂ ಸಂತಾನರಾಮನ್, ವೈರಮುಡಿ ಬ್ರಹ್ಮೋತ್ಸವ ಮತ್ತಷ್ಟು ವೈಭವವಾಗಿ ನಡೆಯಲು ಸಹಕಾರ ನೀಡಿ. ಇದು ನಿಮ್ಮ ಯಶಸ್ಸಿಗೆ ಸಾರ್ಥಕ ಸೇವೆಯಾಗಿ ಉಳಿಯುತ್ತದೆ ಎಂದರು.

ಅರ್ಚಕರಾದ ನಾರಾಯಣಪ್ರಸಾದ್ ಭಟ್ಟರ್, ಸ್ಥಾನೀಕರಾದ ಕೋವಿಲ್ ನಂಬಿ ಪ್ರಸನ್ನ ಇತರರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!