ಬೆಂಗಳೂರು : ಕರ್ನಾಟಕ ಪತ್ರಕರ್ತೆಯರ ಸಂಘದ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆಯಾಗಿ ಪದ್ಮಾ ಶಿವಮೊಗ್ಗ (ಸ್ವತಂತ್ರ) ಉಪಾಧ್ಯಕ್ಷೆಯಾಗಿ ಜೆ.ಎನ್.ವಾಣಿಶ್ರೀ (ಸಂಯುಕ್ತ ಕರ್ನಾಟಕ) ಪ್ರಧಾನ ಕಾರ್ಯದರ್ಶಿಯಾಗಿ ಮಂಜುಶ್ರೀ ಎಂ. ಕಡಕೋಳ (ಪ್ರಜಾವಾಣಿ) ಸಹ ಕಾರ್ಯದರ್ಶಿಯಾಗಿ ಪಂಕಜಾ ಗೊರೂರು (ಸ್ವತಂತ್ರ) ಖಜಾಂಚಿಯಾಗಿ ಹಲಿಮತ್ ಸಾದಿಯಾ (ಉದಯವಾಣಿ)
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಚೇತನಾ ಬೆಳಗೆರೆ (ಸೌತ್ ಫಸ್ಟ್) ಶೀಲಾ ಸಿ. ಶೆಟ್ಟಿ (ವಿಸ್ತಾರ) ಮಿನಿ ತೇಜಸ್ವಿ( ದ ಹಿಂದು) ಕೀರ್ತಿ ಶೇಖರ್ (ಸಂಯುಕ್ತ ಕರ್ನಾಟಕ) ಶ್ರೀಜಾ ವಿ.ಎನ್. (ಅವಧಿ) ಶಾಂತಾ ತಮ್ಮಯ್ಯ (ದೂರದರ್ಶನ) ಅವಿರೋಧವಾಗಿ ಆಯ್ಕೆಯಾದರು.ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತೆ ಎಂ.ಪಿ. ಸುಶೀಲಾ ಕಾರ್ಯನಿರ್ವಹಿಸಿದರು.